ಚಿಕ್ಕಮಗಳೂರು, ಫೆ.28, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನ ಸೆರೆಹಿಡಿದಿರುವ ವಿಂಗ್ ಕಮಾಂಡರ್ ಅಭಿನಂದನ್ ಗೆ ಯಾವುದೇ ತೊಂದರೆ ನೀಡದೆ ವಾಪಸ್ ಕಳುಹಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ವಶದಲ್ಲಿರುವ ಕಮಾಂಡರ್ ಸೌಖ್ಯವಾಗಿ ವಾಪಸ್ ಬರ್ತಾರೆ. ಅವರ ವಿಚಾರವಾಗಿ ನಮ್ಮ ರಾಜ್ಯದಲ್ಲಿ ಸರ್ಕಾರದ ವತಿಯಿಂದ ಹೋರಾಟ ನಡೆಯುತ್ತೆ ಎಂದರು.
ಇನ್ನು ಲೋಕಸಭೆ ಚುನಾವಣೆಗೆ ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೀಟು ಹಂಚಿಕೆಯಲ್ಲಿ 1 ಸೀಟು ಹೆಚ್ಚಾಗಬಹುದು, ಅಥವಾ ಕಮ್ಮಿಯಾಗಬಹುದು. ದೇಶದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇನೆ ಎಂದರು.