ಹಕ್ಕುಪತ್ರ ಪಡೆದು ಜಮೀನು ಮಾರಬೇಡಿ- ಶಾಸಕ ವೆಂಕಟರಮಣಯ್ಯ

ಹಕ್ಕುಪತ್ರ ಪಡೆದು ಜಮೀನು ಮಾರಬೇಡಿ- ಶಾಸಕ ವೆಂಕಟರಮಣಯ್ಯ

ದೊಡ್ಡಬಳ್ಳಾಪುರ, ಜು. 15: ಬಗರ್ಹುಕುಂ ಯೋಜನೆಯಲ್ಲಿ ಹಕ್ಕುಪತ್ರ ಪಡೆಯುವ ಫಲಾನುಭವಿಗಳು ಯಾವುದೇ ಕಾರಣಕ್ಕೂ ಜಮೀನು ಮಾರಬೇಡಿ ಎಂದು ಶಾಸಕ ಹಾಗೂ ಬಯಾಪ ಅಧ್ಯಕ್ಷ ವೆಂಕಟರಮಣಯ್ಯ ಮನವಿ ಮಾಡಿದರು.

ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಬಗರ್ಹುಕುಂ ಸಾಗುವಳಿದಾರರಿಗೆ ಇಂದು  ಹಕ್ಕುಪತ್ರ ವಿತರಿಸಿ ಮಾತನಾಡಿದರು. 2013 ರಿಂದ 18ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಹೋಬಳಿಗಳ 69 ರೈತರಿಗೆಹಕ್ಕುಪತ್ರ ನೀಡಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಕೆಲವರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉಳಿದ ಹಕ್ಕುಪತ್ರ ವಿತರಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದುತಿಳಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ನಿರ್ವಣಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಎಂ.ಕೆ.ರಮೇಶ್ ಮಾತನಾಡಿ, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ 32, ಸಾಸಲು ಹೋಬಳಿಯಲ್ಲಿ 37 ಹಕ್ಕುಪತ್ರ ನಿಡಲಾಗುತಿದೆ. ಉಳಿದ ಹೋಬಳಿಗಳಲ್ಲಿ 482 ಅರ್ಜಿ ಬಾಕಿ ಉಳಿದಿದೆ. 2 ತಿಂಗಳೊಳಗೆವಿತರಿಸಲಾಗುವುದು ಎಂದು ತಿಳಿಸಿದರು.

ತಾ.ಪಂ ಸದಸ್ಯ ಡಿ.ಸಿ.ಶಶಿಧರ್ ಮಾತನಾಡಿ, ಸ್ಥಳೀಯರಿಗೆ ಹಕ್ಕುಪತ್ರ ವಿತರಿಸುವ ಶಾಸಕರು ಶ್ರಮಿಸಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿ 15 ದಿನದೊಳಗೆ ಹಕ್ಕು ವಿತರಣೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಎಪಿಎಂಸಿ ನಿರ್ದೇಶಕ ಗೋವಿಂದರಾಜ್, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಜಿಪಂ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ, ತಾಪಂ ಸದಸ್ಯ ಡಿ.ಸಿ.ಶಶಿಧರ್ ಇದ್ದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos