ಹೆಚ್. ವಿಶ್ವನಾಥ್ ಕುಟುಂಬಕ್ಕೆ ಕೊಲೆ ಬೆದರಿಕೆ

ಹೆಚ್. ವಿಶ್ವನಾಥ್ ಕುಟುಂಬಕ್ಕೆ ಕೊಲೆ ಬೆದರಿಕೆ

ಮೈಸೂರು, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಸಚಿವ ಜಿ.ಟಿ.ದೇವೇಗೌಡ ಬೆಂಬಲಿಗರ ನಡುವಿನ ಶೀತಲ ಸಮರ ಜೋರಾಗಿದ್ದು, ಇದೀಗ ಕೊಲೆ ಬೆದರಿಕೆ ಹಂತಕ್ಕೆ ಬಂದು ತಲುಪಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಒಡ್ಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಿತ್ತಾಟ ನಡೆಯುತ್ತಿದೆ.

ಹೆಚ್. ವಿಶ್ವನಾಥ್ ಕುಟುಂಬವನ್ನು ಕೊಲೆ ಮಾಡುತ್ತೇನೆ ಎಂದು ವಿಶ್ವನಾಥ್ ವಿರುದ್ಧ ಜೆಡಿಎಸ್ ತಾಲೂಕು ಕಾರ್ಯದರ್ಶಿ ಅರುಣ್ ಕುಮಾರಸ್ವಾಮಿ ಎಂಬುವರು ಕಮೆಂಟ್ ಮಾಡಿದ್ದಾರೆ. ಸಚಿವ ಜಿ.ಟಿ. ದೇವೇಗೌಡ ಬೆಂಬಲಿಗರಾದ ಹುಣಸೂರು ಕಸಬಾ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಪ್ರದೀಪ್ ಒಕ್ಕಲಿಗ ಮತ್ತು ಅರುಣ್ ಕುಮಾರ್ ನಡುವೆ ನಡೆದ ಜಗಳದಲ್ಲಿ ಫೇಸ್ ಬುಕ್ ಚರ್ಚೆ ನಡೆದಿದ್ದು, ಕೆಲ ಹೊತ್ತಿನ ನಂತರ ಕಮೆಂಟ್ಸ್ ನ್ನು ಡಿಲೀಟ್ ಮಾಡಲಾಗಿದ್ದು, ಕಾರ್ಯಕರ್ತರ ನಡುವಿನ ಟಾಕ್ ವಾರ್ ಮುಂದುವರೆದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos