ರೇವಣ್ಣನಿಂದ ನಿಂಬೆಹಣ್ಣು ಸ್ವೀಕರಿಸಲು ನಿರಾಕರಿಸಿದ ʼಕೈʼ ನಾಯಕಿ!

ರೇವಣ್ಣನಿಂದ ನಿಂಬೆಹಣ್ಣು ಸ್ವೀಕರಿಸಲು ನಿರಾಕರಿಸಿದ ʼಕೈʼ ನಾಯಕಿ!

ಹಾಸನ, ಏ. 13, ನ್ಯೂಸ್ ಎಕ್ಸ್ ಪ್ರೆಸ್ : ಚುನಾವಣೆ ಬಂದ ಮೇಲಂತೂ ರೇವಣ್ಣ ಅಂದ್ರೆ ನಿಂಬೆಹಣ್ಣು, ನಿಂಬೆಹಣ್ಣು ಅಂದ್ರೆ ರೇವಣ್ಣ ಅನ್ನುವಂತಾಗಿದೆ. ಇನ್ನು ಸಭೆ ಸಮಾರಂಭಗಳಿಗೆ ಹೋದ್ರೂ, ತಮ್ಮ ಜೊತೆ ಇರುವವರಿಗೂ ಹೆಚ್‍.ಡಿ. ರೇವಣ್ಣ ನಿಂಬೆಹಣ್ಣು ಕೊಡ್ತಾರೆ. ಅಂತೆಯೇ ಹಾಸನದ ಅರಕಲಗೊಡಿನಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲೂ ಕಾಂಗ್ರೆಸ್ ನಾಯಕಿಗೆ ನಿಂಬೆಹಣ್ಣು ಕೊಡಲು ಹೋದಾಗ, ಅವರು ಅದನ್ನು ಸ್ವೀಕರಿಸಲು ಹಿಂದೇಟು ಹಾಕಿದ ಘಟನೆ ನಡೆದಿದೆ. ಮೊನ್ನೆ ಪ್ರಜ್ವಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಗಾಯತ್ರಿ ಶಾಂತೇಗೌಡ ಅವರಿಗೆ ರೇವಣ್ಣ ನಿಂಬೆಹಣ್ಣು ಕೊಡಲು ಹೋಗಿದ್ದಾರೆ. ಆದ್ರೆ ಗಾಯತ್ರಿ ಅವರು ನಿಂಬೆಹಣ್ಣು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಆದ್ರೆ ರೇವಣ್ಣ ಒತ್ತಾಯಪೂರ್ವಕವಾಗಿ ನಿಂಬೆಹಣ್ಣು ಕೊಟ್ರು. ಆದ್ರೆ ಅದನ್ನು ಕೈಯಲ್ಲಿ ಸ್ವೀಕರಿಸಿ ತಕ್ಷಣವೇ ಗಾಯತ್ರಿಯವರು ಕೆಳಗಿಟ್ಟ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos