ಶಿವಮೊಗ್ಗ, ನ. 10 : ಸಿಎಂ ಬಿ. ಎಸ್. ಯಡಿಯೂರಪ್ಪ ಗೊಂದಲ ಮಾಡದಿದ್ದರೆ ಅಭಿವೃದ್ಧಿ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಸುವಲ್ಲ ಅವರು ಹೋರಿ. ಅವರಿಗೆ ಗೊಂದಲವಿಲ್ಲದೆ ಕೆಲಸ ಮಾಡಲು ಬಿಡಬೇಕು ಎಂದರು.
ಆಯನೂರು ಮಂಜುನಾಥ್ ಅವರ ಈ ಮಾತುಗಳು ಬಿಎಸ್ ವೈ ಅವರಿಗೆ ಆಡಳಿತ ನಡೆಸಲು ಸ್ವಪಕ್ಷದ ನಾಯಕರೇ ಗೊಂದಲ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.