ಕೊಟ್ಟೂರು: ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಟಗೇರಿ ಗ್ರಾಮದಲ್ಲಿ ಗುರುವಾರದಂದು ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸುಮಾರು 2ಲಕ್ಷ ರೂ ಹಣ ಬಿಡುಗಡೆ ಗೊಂಡಿದ್ದ ಕಾರಣ ರಾಂಪುರ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ತಿಮ್ಮಣ್ಣ ನವರು ಭೇಟಿ ನೀಡಿ ಜಾಗಟಗೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು ಮತ್ತು ಶೀಘ್ರದಲ್ಲೇ ವಿಲೇವಾರಿ ವಾಹನ ಖರೀದಿ ಮಾಡಿ ಕೆಲಸ ಮಾಡಿಸುವುದರ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಹಿಳಾ ಯೋಜನೆ ಗಳನ್ನು ಸರಿಯಾಗಿ ಸದುಪಯೋಗ ವಾಗಬೇಕು ಮತ್ತು ಮಹಿಳಾ ಸಂಘ ಸಂಸ್ಥೆ ಗಳಿಗೆ ಯೋಜನೆಗಳನ್ನ ರೂಪಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಗ್ರಾಮದ ಮುಖಂಡ ರುದ್ರೇಶ್. ಭೀಮೇಶ್ ರವರು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಇಂಜಿನಿಯರ್ ರವಿಕುಮಾರ್. ಏಕಾಂತಪ್ಪ ಇದ್ದರು.