ಸ್ಮಶಾನ ಖರೀದಿಗಾಗಿ ಅನುಧಾನ ಬಿಡುಗಡೆಗೆ ಇಓ ಮನವಿ

ಸ್ಮಶಾನ ಖರೀದಿಗಾಗಿ ಅನುಧಾನ ಬಿಡುಗಡೆಗೆ ಇಓ ಮನವಿ

ಕೊಟ್ಟೂರು: ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಪ್ಪರದಹಳ್ಳಿ ಗ್ರಾಮದಲ್ಲಿ ಸ್ಮಶಾನ ವ್ಯವಸ್ಥೆ ಇರುವುದಿಲ್ಲ. ಇದುವರೆಗೂ ನಾಲ್ಕು ಕಿಲೋಮೀಟರ್ ದೂರದಲ್ಲಿನ ಹಳ್ಳದಲ್ಲಿ ಶವಸಂಸ್ಕಾರ ನಡುಸುತ್ತಿದ್ದರು ಎಂದು ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಕೊಟ್ರೇಶ್ ಹೇಳಿದರು.

ಬುಧವಾರ ತಲೂಕು ಪಂಚಾಯಿತಿ ಕಚೇರಿ ಎದುರು ಮಾತನಾಡಿ ಈಗ ಚಪ್ಪರದಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಪಟ್ಟಾ ಜಮೀನುನ್ನು ಖರೀದಿಸಿಲು ಚಪ್ಪರದಹಳ್ಳಿ ಕಂದಾಯ ಗ್ರಾಮದ ಸರ್ವೇ ನಂ 5ಎ ವಿಸ್ತೀರ್ಣ 1.06 ಒಟ್ಟು 2.17ಎಕರೆ ಜಮೀನನ್ನು ಗ್ರಾಮದ ಸ್ಮಶಾನಕ್ಕಾಗಿ ಪಂಚಾಯಿತಿ ಆಡಳಿತಕ್ಕೂ ಹಾಗೂ ಸದರಿ ಪಹಣಿಗಳ ಹಕ್ಕುದಾರರು ಜಮೀನು ಕೊಡಲು ಒಪ್ಪಿರುತ್ತಾರೆ. ಸದರಿ ಜಮೀನುಗಳನ್ನು ಖರೀದಿಸಲು ಹೆಚ್ಚಿನ ಅನುಧಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುಲುಮನೆ ತಿಮ್ಮಣ್ಣರಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos