ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಜನರು ಹೆಚ್ಚಾಗಿ ಮೆಟ್ರೋ ಅನ್ನು ಬಳಸುತ್ತಿದ್ದಾರೆ. ಇದರಿಂದ ನಮ್ಮ ಸಮಯವೂ ಸಹ ಉಳಿಯುತ್ತದೆ ಹಾಗೂ ಸರಿಯಾದ ಸಮಯಕ್ಕೆ ಆಫೀಸ್ ಗಳಿಗೆ, ಶಾಲಾ ಕಾಲೇಜು ಹೋಗಬಹುದು.
ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಕೈ ಕೊಟ್ಟ ನಮ್ಮ ಮೆಟ್ರೋ ಹೀಗಾಗಿ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ನೇರಳೆ ಮಾರ್ಗದ ಮೆಟ್ರೋ ದಿಢೀರ್ ಟೆಕ್ನಿಕಲ್ ಸಮಸ್ಯೆಯಾಗಿದ್ದು ಸಂಚಾರದಲ್ಲಿ ವ್ಯತ್ಯಯವಾಗಿದ್ದು ಎಂ.ಜಿ ರಸ್ತೆ ಟು ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಮೆಟ್ರೋ ಸಂಚಾರದಿಂದ ಪ್ರಯಾಣಿಕರು ಪರದಾಟ ಮೆಟ್ರೋ ನಿಲ್ದಾಣಗಳಲ್ಲಿ ನಿಂತಲ್ಲೇ ನಿಂತ ಪ್ರಯಾಣಿಕರು. ಟೆಕ್ನಿಕಲ್ ಸಮಸ್ಯೆ ಸರಿಪಡಿಸುತ್ತಿರುವ ಬಿಎಂಆರ್ಸಿಲ್ ಸಿಬ್ಬಂದಿ ಒಂದುಗಂಟೆಯೊಳಗೆ ತಾಂತ್ರಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಿಎಂಆರ್ಸಿಲ್.