ಶ್ವಾನಗಳನ್ನು ಬಂಧಿಸುವಂತೆ ದೂರು

ಶ್ವಾನಗಳನ್ನು ಬಂಧಿಸುವಂತೆ ದೂರು

ಬೆಂಗಳೂರು, ಜು.05 : ನಗರದ ಹೊರಮಾವು ವಾರ್ಡ್ನ ದೊಡ್ಡಯ್ಯ ಬಡಾವಣೆ ಯಲ್ಲಿ ನಾಯಿಗಳಿಗೆ ಹೆದರಿಕೊಂಡು ಜನ ತಿರುಗಾಡುವುದಕ್ಕೆ ಭಯಭೀತರಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸೋದು ಇರಲಿ, ರಸ್ತೆಯಲ್ಲಿ ಆಟವಾಡಲು ಬಿಡೋಕು ಹಿಂದೇಟು ಹಾಕುತ್ತಿದ್ದಾರೆ.
2018ರ ಜೂನ್ 27ರಲ್ಲಿ ಹೊರಮಾವು ವಾರ್ಡ್ ನ ದೊಡ್ಡಯ್ಯ ಬಡಾವಣೆಯಲ್ಲಿ ನಾಯಿಯೊಂದು ಮಗುವನ್ನು ಎಳೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 5 ನಾಯಿಗಳ ವಿರುದ್ಧ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ನಾಯಿಗಳ ಅಟ್ಟಹಾಸದಿಂದ ಈಗಾಗಲೇ 10ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟರೆ, ಪ್ರಾಣಿ ದಯಾ ಸಂಘದ ನಿಯಮಗಳ ಪ್ರಕಾರ ನಾಯಿಗಳನ್ನು ಬಂಧಿಸಲ್ಲ ಎನ್ನುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos