ದಾಸರಹಳ್ಳಿ, ಸೆ. 8: ದಾಸರಹಳ್ಳಿಯಲ್ಲಿ ಸಾಮೂಹಿಕ ಗಣೇಶ ಉತ್ಸವ ಸಮಿತಿ ವತಿಯಿಂದ ಇಂದು ಮಹಿಳೆಯರಿಗೆ ಬಾಗಿನವನ್ನು ಕೊಟ್ಟು ಹಾಗೆಯೇ ವಿಶೇಷವಾಗಿ ಮಹಿಳೆಯರಿಗೆ ಸ್ವಚ್ಛ ಭಾರತದ ಅರಿವು ಮೂಡಿಸಲು ಒಣ ತ್ಯಾಜ್ಯ ಹಸಿ ತ್ಯಾಜ್ಯ ವಿಂಗಡಿಸಿ ಕಸ ಮುಕ್ತ ನಾಡು ಮಾಡಲು ಕಸದ ಬುಟ್ಟಿಯನ್ನು ಸುಜಾತ ಮುನಿರಾಜು ರವರ ನೇತೃತ್ವದಲ್ಲಿ ನೀಡಲಾಯಿತು.
ಈ ಸಮಯದಲ್ಲಿ ಮಲ್ಲಸಂದ್ರ ಪಾಲಿಕೆ ಸದಸ್ಯ ಲೋಕೇಶ್ ಎನ್ ಯುವ ಮೋರ್ಚಾ ಅಧ್ಯಕ್ಷ ಎನ್ ಸತೀಶ್ ಮುಂತಾದ ಕಾರ್ಯಕರ್ತರು ಇದ್ದರು.