ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ನೂರಾರೂ ಭಕ್ತರು!

ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ನೂರಾರೂ ಭಕ್ತರು!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಭಕ್ತರು ಪ್ರಸಾದವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಹೊಸಕೋಟೆಯಲ್ಲಿ ಪ್ರಸಾದ ಸೇವಿಸಿ ನೂರಾರು ಜನ ಭಕ್ತರು ಅಸ್ವಸ್ಥ ಆಗಿರುವ ಘಟನೆ ನಡೆದಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ನೆನ್ನೆ ಪ್ರಸಾದ ವಿತರಣೆ ಮಾಡಲಾಗಿತ್ತು. ಹೊಸಕೋಟೆಯ ವೆಂಕಟಸ್ವಾಮಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಗಿತ್ತು. ಊರು ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ವಿತರಣೆಯಾಗಿದ್ದು ಪುಳಿಯೋಗರೆ, ಪಾಯಸ, ಲಡ್ಡು, ತಿಂದ ಭಕ್ತರಿಗೆ ವಾಂತಿಭೇದಿ ಶುರುವಾಗಿದೆ.  ಹೊಸಕೋಟೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಅಸ್ವಸ್ಥರು ದಾಖಲಾಗಿದ್ದಾರೆ ಆಸ್ಪತ್ರೆಗಳಲ್ಲಿ ನರಳುತ್ತಿರುವ ಅಸ್ವಸ್ಥರು .

ಫ್ರೆಶ್ ನ್ಯೂಸ್

Latest Posts

Featured Videos