ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ನಾಶ

ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ನಾಶ

ಮಹದೇವಪುರ, ನ. 07: ಅಬಕಾರಿ ಉಪ ಆಯುಕ್ತರ ಆದೇಶ ಅನುಸಾರ ಅಕ್ರಮವಾಗಿದ್ದ ಸುಮಾರು 7.5 ಲಕ್ಷ ರೂ ಮದ್ಯವನ್ನು ಪರಿಸರಕ್ಕೆ ಹಾನಿಯಾಗದಂತೆ ನಾಶ ಪಡಿಸಲಾಯಿತೆಂದು ಅಬಕಾರಿ ಉಪ ಅಧೀಕ್ಷಕರಾದ ತಿಪ್ಪೇಸ್ವಾಮಿ ತಿಳಿಸಿದರು.

ಕಾಡುಗುಡಿ ಬಳಿ ಕೆ.ಎಸ್.ಬಿ.ಡಿ.ಎಲ್ ಡಿಪೋದಲ್ಲಿ ಎಲ್ಲಾ ಉಪ ವಿಭಾಗಗಳಿಂದ ವಶಪಡಿಸಿಕೊಂಡಿರುವ ಸುಮಾರು 7.5 ಲಕ್ಷ ರೂ ಅಕ್ರಮ ಮದ್ಯವನ್ನು ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ನಾಶ ಪಡಿಸಿ ಅವರು ಮಾತನಾಡಿದರು,

ಅಬಕಾರಿ ಉಪ ಆಯುಕ್ತರ ಆದೇಶದಂತೆ ಅವಧಿ ಮೀರಿದ ಬೀರು ಪಾನೀಯಗಳನ್ನು ಮರು ಬಳಸದೆ ನಾಶ ಪಡಿಸಲಾಯಿತೆಂದರು. ಅವಧಿ ಮೀರಿದ ಮದ್ಯ ಹಾಗು ಅಕ್ರಮವಾಗಿ ಸಂಗ್ರಹಿಸಿರುವ ಮದ್ಯವನ್ನು ವಶ ಪಡಿಸಿಕೊಂಡು ನಾಶ ಪಡಿಸಲಾಯಿತು. ಅವಧಿ ಮೀರಿದ ಮದ್ಯ ಸೇವಿಸುವುದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಆ ಮದ್ಯವನ್ನು ಬಳಸಬಾರದೆಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೈಟ್‌ಫೀಲ್ಡ್ ಡಿಪೋ ವ್ಯೆವಸ್ಥಾಪಕ ಚಂದ್ರಶೇಖರ್, ನಿರೀಕ್ಷಕರಾದ ನಾರಾಯಣ, ಇಂದ್ರಕುಮಾರ್, ಆಶಾರಾಣಿ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos