ಡಿಸಿ ಹೀಗೆ ಹೇಳಿದ್ಯಾಕೆ!?

ಡಿಸಿ ಹೀಗೆ ಹೇಳಿದ್ಯಾಕೆ!?

ಬಾಗಲಕೋಟೆ : ನನ್ನದು ತಪ್ಪಿದ್ರೆ ಮಿನಿಸ್ಟರ್ ಕಾಲ ಕೆಳಗೆ ಕುಳಿತು ಬಿಡ್ತೀನಿ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ರಾಜೇಂದ್ರ ಹೇಳುವ ಮೂಲಕ ಕಬ್ಬಿನ ಬಾಕಿ ಬಿಲ್ ಕೇಳಲು ಬಂದ ರೈತರಿಗೆ ಸವಾಲೆಸೆದರು.
ಕಬ್ಬು ಬಾಕಿ ಬಿಲ್ಗೆ ಆಗ್ರಹಿಸಿ, ಮುಧೋಳ ತಾಲೂಕಿನ ಕಬ್ಬು ಬೆಳೆಗಾರರು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮನವಿ ಸ್ವೀಕರಿಸುವ ವೇಳೆ ಜಿಲ್ಲಾಧಿಕಾರಿ ಈ ರೀತಿಯಾಗಿ ರೈತರಿಗೆ ಪ್ರತ್ಯುತ್ತರ ನೀಡಿದರು.

ನಾನು ಬಂದ್ಮೇಲೆ ರೈತರಿಗೆ ಹೆಚ್ಚು ಬಿಲ್ ಕೊಡಿಸಿದ್ದೇನೆ. ನಾಬರುವ ಮುಂಚೆ ಎಷ್ಟೆಷ್ಟು ಕಬ್ಬಿನ ಬಿಲ್ ಪೇಮೆಂಟ್ ಮಾಡಿದ್ದಾರೆ ನೋಡಿ. ನಾ ಬಂದಮೇಲೆ ಎಷ್ಟು ಬಿಲ್ ಕೊಡಿಸಿದ್ದೀನಿ ಹೇಳಿ. ನನ್ನದು ತಪ್ಪಿದ್ದರೆ ಮಿನಿಸ್ಟರ್ ಕಾಲ ಕೆಳಗೆ ಕುಳಿತು ಬಿಡ್ತೀನಿ ಎಂದು ರೈತರಿಗೆ ಖಾರವಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos