ದಸರಾ ಯುವ ಕವಿಗೋಷ್ಠಿಗೆ ಯುವಜನರು ಬಾರದೇ ಮುಕ್ತಾಯ!

ದಸರಾ ಯುವ ಕವಿಗೋಷ್ಠಿಗೆ ಯುವಜನರು ಬಾರದೇ ಮುಕ್ತಾಯ!

ಬೆಂಗಳೂರು: ನಮ್ಮ ಕರ್ನಾಟಕ ಹೆಮ್ಮೆಯ ಹಬ್ಬದ ನಾಡಹಬ್ಬ ವೆಂದರೆ ಇಡೀ ವಿಶ್ವದಾದ್ಯಂತ ಈ ಹಬ್ಬ ಹಬ್ಬಿದೆ ಇದರಿಂದ ಹಲವಾರು ವಿದೇಶಿ ಪ್ರವಾಸಿಗರು ಮೈಸೂರು ದಸರ ವೀಕ್ಷಿಸಲು ಹಲವಾರು ಕಡೆಯಿಂದ ಬಂದಿರುತ್ತಾರೆ. ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ದಸರಾ ಯುವ ಕವಿಗೋಷ್ಠಿಗೆ ಯುವಜನರು ಬಾರದೇ ಮುಕ್ತಾಯವಾಗಿದೆ. ನಗರದ ಡಾ. ರಾಜ್‌ ಕುಮಾರ್‌ ಕಲಾ ಮಂದಿರದಲ್ಲಿ ದಸರಾ ಯುವ ಕವಿಗೋಷ್ಠಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೆ 12 ಗಂಟೆಯಾದರೂ ಆರಂಭವಾಗಿರಲಿಲ್ಲ. ಬೆಳಿಗ್ಗೆ 11ಕ್ಕೆ ಕವಿಗೋಷ್ಠಿ ಉದ್ಘಾಟನೆಗೆ ಸಚಿವರು ಆಗಮಿಸಬೇಕಿತ್ತು. ಸಚಿವರು ಇತರೆ ಕಾರ್‍ಯಕ್ರಮಗಳು ಹಾಗೂ ರೈತರ ಸಭೆಗೆ ಹೋಗಿದ್ದರಿಂದ ಕವಿಗೋಷ್ಠಿಗೆ ಬಂದಿರಲಿಲ್ಲ.
ಯುವ ಕವಿಗೋಷ್ಠಿ ಪ್ರಾರಂಭವಾದಾಗ ಊಟದ ಸಮಯವಾಗಿದ್ದರಿಂದ ಯುವತಿಯರು ಕವಿಗೋಷ್ಠಿ ಕಾರ್‍ಯಕ್ರಮದಿಂದ ಹೊರಗೆ ಹೋಗಿದ್ದರಿಂದ ಯುವ ಕವಿಗೋಷ್ಠಿಯಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಮಧ್ಯಾಹ್ನ 2.30ರ ವರೆಗೂ ಯುವಗೋಷ್ಠಿಯ ಉದ್ಘಾಟನೆ ನಡೆಯದೇ ಯುವ ಜನರಿಲ್ಲದೇ ಮುಕ್ತಾಯವಾಯಿತು.

ಫ್ರೆಶ್ ನ್ಯೂಸ್

Latest Posts

Featured Videos