ದಸಂಸ ಅವಿರೋಧ ಆಯ್ಕೆ

  • In State
  • August 19, 2020
  • 178 Views
ದಸಂಸ ಅವಿರೋಧ ಆಯ್ಕೆ

ಮಾಲೂರು :ತಾಲೂಕು ದಲಿತ ಸಂಘರ್ಷ ಸಮಿತಿ(ಬೀಮವಾದ) ತಾಲೂಕು ಅಧ್ಯಕ್ಷರಾಗಿ ದ್ಯಾಪಸಂದ್ರ ವೆಂಕಟೇಶ್ ಅವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ರೆಡ್ಡಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಬೀಮವಾದ)ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ) ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಎಂ.ಚAದ್ರಶೇಖರ್ ಅವರ ಅಧ್ಯಕ್ಷತೆ ನಡೆದ ಸಭೆಯಲ್ಲಿ ತಾಲೂಕು ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕರಾಗಿ ತಂಬಿಹಳ್ಳಿ ನಾರಾಯಣಸ್ವಾಮಿ, ಕೊಂಡಶೆಟ್ಟಿಹಳ್ಳಿ ಕೆ.ಎಂ.ರಾಜಣ್ಣ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಚನ್ನಕಲ್ಲು ಮುರುಳಿಮೌರ್ಯ, ತಾಲೂಕು ಅಧ್ಯಕ್ಷರಾಗಿ ದ್ಯಾಪಸಂದ್ರ ವೆಂಕಟೇಶ್, ಸಂಘಟನಾ ಸಂಘಟನಾ ಸಂಚಾಲಕರಾಗಿ ರ‍್ರಪಶೆಟ್ಟಿಹಳ್ಳಿ ಶಿವಾನಂದ್, ಹಾರೋಹಳ್ಳಿ ವೆಂಕಟೇಶ್, ತೃಣಿಸಿ ನಾರಾಯಣಸ್ವಾಮಿ, ಚನ್ನಕಲ್ಲು ಅಂಬರೀಶ್, ಕಾಂತರಾಜ್, ತೋಟಗೌಡನಹಳ್ಳಿ ಅಶೋಕ್, ಖಜಾಂಚಿ ಕಡದನಹಳ್ಳಿ ಮುರುಳೀಧರ್, ನಗರ ಸಂಚಾಲಕ ಬಷೀರ್‌ಖಾನ್, ತಾಲೂಕು ಕಾರ್ಮಿಕ ಘಟಕ ಸಂತೋಷ್, ಮಿಟ್ಟಿಗಾನಹಳ್ಳಿ ಹರೀಶ್, ತಾ.ವಿದ್ಯಾರ್ಥಿ ಘಟಕ ಸತೀಶ್ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಲಪಗಾನಹಳ್ಳಿ ಮಂಜುನಾಥ್, ಆರ್.ಪಿ.ಐ ತಾಲೂಕು ಅಧ್ಯಕ್ಷ ಹಳೇಹಳ್ಳಿ ತಿಮ್ಮರಾಯಪ್ಪ, ಮಾರ್ಕೋಂಡಪ್ಪ, ರೈಲ್ವೇಸ್ಟೇಷನ್ ರಾಜು, ನಗರಾಧ್ಯಕ್ಷ ಆನಂದ್ ಬೈರಾ, ಉಪಾಧ್ಯಕ್ಷರಾದ ಚಂಬೆ ಪಾಷಾ, ಶಬ್ಭಿರ್, ಖಜಾಂಚಿ ಚನ್ನಿರಾಯಪುರ ಚೌಡಪ್ಪ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos