ಗುತ್ತಿಗೆದಾರರಿಗೆ ಅಕ್ರಮ ಹಣ ವರ್ಗಾವಣೆಯೇ ಐಟಿ ದಾಳಿಗೆ ಕಾರಣ!?

ಗುತ್ತಿಗೆದಾರರಿಗೆ ಅಕ್ರಮ ಹಣ ವರ್ಗಾವಣೆಯೇ ಐಟಿ ದಾಳಿಗೆ ಕಾರಣ!?

ಬೆಂಗಳೂರು, ಮಾ, 28, ನ್ಯೂಸ್ ಎಕ್ಸ್ ಪ್ರೆಸ್: ಲೋಕೋಪಯೋಗಿ ಇಲಾಖೆಯಲ್ಲಿ ಒಪ್ಪಂದಕ್ಕೆ ಮುನ್ನ, ಪ್ಯೂಚರ್​ ಟೆಂಡ್​ ಎಂಬ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಕೆಲಸವೇ ಪ್ರಾರಂಭವಾಗದೆ ಗುತ್ತಿಗೆದಾರರ ಖಾತೆಯಲ್ಲಿ ಕೋಟಿ ಕೋಟಿ ಹಣ ವರ್ಗಾವಣೆಯಾಗಿರುವುದು ಅನುಮಾನ ಮೂಡಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಇದರ ಬೆನ್ನಲ್ಲೇ ಈ ದಾಳಿಯನ್ನು ನಡೆಸಲಾಗಿದೆ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾದ ಕೃಷ್ಣೇಗೌಡ, ಸಾದಿಕ್, ಅಶ್ವಥ್ ನಾರಾಯಣಗೌಡ ಖಾತೆಗೆ ಕೋಟಿ ಕೋಟಿ ಹಣ ಸಂದಾಯವಾಗಿದೆ, ಈ ವ್ಯವಹಾರ ಚುನಾವಣೆಗಾಗಿಯೇ ನಡೆಸಲಾಗಿದೆ ಎಂದು ಇಲಾಖೆ ಅನುಮಾನಿಸಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಒಪ್ಪಂದಕ್ಕೆ ಮುನ್ನ, ಪ್ಯೂಚರ್​ ಟೆಂಡ್​ ಎಂಬ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಕೆಲಸವೇ ಪ್ರಾರಂಭವಾಗದೆ ಗುತ್ತಿಗೆದಾರರ ಖಾತೆಯಲ್ಲಿ ಕೋಟಿ ಕೋಟಿ ಹಣ ವರ್ಗಾವಣೆಯಾಗಿರುವುದು ಅನುಮಾನ ಮೂಡಿಸಿದೆ. ಹಣ ವರ್ಗಾವಣೆ ಆಗಿರುವ ಗುತ್ತಿಗೆದಾರರೆಲ್ಲಾ ರೇವಣ್ಣ ಆಪ್ತರಾಗಿದ್ದು, ಸರ್ಕಾರದ ಹಣವನ್ನು ಚುನಾವಣಾ ಸಮಯದಲ್ಲಿ ದುರ್ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಕೂಡ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos