ಜ.18 ಕ್ಕೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಜ.18 ಕ್ಕೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ, ಜ. 14: ಇದೇ ಜನೆವರಿ18 ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗೋ ಬ್ಯಾಕ್ ಎಂದು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಸಿಎಎ.ಎನ್ಆರ್ಸಿ.ಹಾಗೂ ಎನ್. ಪಿ.ಆರ್.ವಿರೋಧಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ತಿಳಿಸಿದ್ದಾರೆ.

ಕೆಲಸ ಇಲ್ಲದ ಬಡಿಗ ಎಂದು ಕಾಂಗ್ರೆಸ್ ನವರಿಗೆ ಲೇವಡಿ ಮಾಡಿರುವ ಸಚಿವ ಜಗದೀಶ್ ಶೆಟ್ಟರ್ ತಮ್ಮ ಇಪ್ಪತೈದು ವರ್ಷಗಳ ಸುಧೀರ್ಘ ಅಧಿಕಾರಾವಧಿಯಲ್ಲಿ ಹುಬ್ಬಳ್ಳಿಯನ್ನು ಕನಿಷ್ಟ ಪಕ್ಷ ಧೂಳುಮುಕ್ತ ನಗರವನ್ನಾಗಿ ಮಾಡಲು ಆಗಿಲ್ಲ. ಬೇರೆ ಕಡೆ ವಿಫಲವಾದ ಬಿ.ಆರ್.ಟಿ.ಎಸ್. ಯೋಜನೆಯನ್ನು ಹುಬ್ಬಳ್ಳಿಗೆ ತಂದು ಬಿಗುತ್ತಿದ್ದು ಯಾವ ಪುರುಷಾರ್ಥಕ್ಕೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ನಂತರ ಬೇರೆಯವರ ಬಗ್ಗೆ ಟೀಕೆ ಮಾಡುವುದು ಒಳಿತು. ಪ್ರಧಾನಿ ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಮಹದಾಯಿ ವಿಷಯ ಬಗೆಹರಿಸಬಹುದು. ಆದರೆ, ಇವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.  ಕೆಲಸಿಲ್ಲದ ಬಡಿಗ ಯಾರು ಅಂತ ಹುಬ್ಬಳ್ಳಿಯ ಜನರಿಗೆ ಈಗ ಚೆನ್ನಾಗಿ ಗೊತ್ತಾಗಿದೆ ಅದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಎಂದು ಜಗದೀಶ್ ಶೆಟ್ಟರ್ ಅವರನ್ನು ಅಲ್ತಾಫ ಹಳ್ಳೂರ ಟಾಂಗ್ ಕೊಟ್ಟಿದ್ದಾರೆ.

ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಆಳಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯನ್ನು ಕಾಂಗ್ರೆಸ್ ಖಂಡಿಸಿ ಅಮಿತ್ ಷಾಹ್ ಅವರಿಗೆ ಮನವರಿಕೆ ಮಾಡಿ ಕೊಡುವ ನಿಟ್ಟಿನಲ್ಲಿ ಜನವರಿ18 ರ ಪ್ರತಿಭಟನೆ ನಮಗೆ ಅನಿವಾರ್ಯ ಎಂದು ಅಲ್ತಾಫ ಹಳ್ಳೂರ ಅವರು ತಿಳಿಸಿದ್ದು, ಎಲ್ಲಿಯವರೆಗೆ ಕೇಂದ್ರದ ಬಿಜೆಪಿ ಸರ್ಕಾರ ಸಿ.ಎ.ಎ.ಎನ್.ಆರ್.ಸಿ.ಹಾಗೂ ಎನ್.ಪಿ.ಆರ್.ಗಳಂತಹ  ಜನ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಶಾಂತಿಯುತ ಹೋರಾಟ ನಿರಂತರವಾಗಿ ನಡೆಯುತ್ತೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos