ಹೊಸಕೋಟೆ: ಸಿಎಂ, ಎಂಟಿಬಿ ವಿರುದ್ಧ ಕಾಂಗ್ರೆಸ್ ದೂರು

ಹೊಸಕೋಟೆ: ಸಿಎಂ, ಎಂಟಿಬಿ ವಿರುದ್ಧ ಕಾಂಗ್ರೆಸ್ ದೂರು

ಬೆಂಗಳೂರು, ನ. 21: ಓಟನ್ನು ಗಿಟ್ಟಿಸಿಕೊಳ್ಳಲು ಹೊಸಕೊಟೆ ವಿಧಾನಸಭಾ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಆಡಳಿತ ಹಾಗೂ ವಿಪಕ್ಷದ ನಾಯಕರು ಮಾತಿಗೆ ಎದುರು ಮಾತುಗಳನ್ನು ಆಡುವ ಮೂಲಕ ನಾವೇ ಈ ಭಾರಿ ಕದನದಲ್ಲಿ ಗೆದ್ದು ಬೀಗುತ್ತೇವೆಂಬ ಛಲದ ಮಾತುಗಳು ಅವರ ಬಾಯಿಂದಲೇ ಬರುತ್ತಿವೆ.  ಹೌದು, ಹೊಸಕೋಟೆಯಲ್ಲಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇಲೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.

ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡ ಹೇಮಂತ್ ಕುಮಾರ್ ದೂರು ನೀಡಿದ್ದಾರೆ. ಇದೇ ನ. 18ರಂದು ಎಂಟಿಬಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯಿಂದ 60 ಮೀಟರ್ ದೂರದಲ್ಲೇ ಅನುಮತಿ ಪಡೆಯದೇ ಬೃಹತ್ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಗೆಲ್ಲಿಸಿದರೆ 24 ಗಂಟೆಯಲ್ಲಿ ಮಂತ್ರಿ ಆಗುತ್ತಾರೆ. ಹೋಸಕೋಟೆಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದೀನಿ ಎಂದು ಸಿಎಂ ಮತದಾರರಲ್ಲಿ ಪ್ರಭಾವ ಬೀರಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos