ಚಿಂಚೋಳಿ : ತಾಲ್ಲೂಕಿನ ವಿಶ್ವ ಹಿಂದು ಪರಿಷದ್ ಘಟಕದ ವತಿಯಿಂದ ಚಿಂಚೋಳಿ ಮತ್ತು ಚಂದಾಪುರ ನಗರದಲ್ಲಿ ಆಸ್ಪತ್ರೆ, ಪೋಲಿಸ್ ಸಿಬ್ಬಂದಿ, ಪುರಸಭೆ ಸಫಾಯಿ ಕರ್ಮಚಾರಿಗಳು, ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ತೊರೆದು ಸಮಾಜದ ಒಳಿತಿಗಾಗಿ ಕೆಲಸ ಮಾಡಿರುವುದನ್ನು ಸ್ಮರಿಸಿ ವಿಶ್ವ ಹಿಂದು ಪರಿಷದ್ ತಾಲೂಕು ಅಧ್ಯಕ್ಷ ಮಹೇಶ ಕಿವಣೂರಕರ್ ನೇತೃತ್ವದಲ್ಲಿ ಗುರುವಾರ ರಾಖೀ ಕಟ್ಟುವ ಮೂಲಕ ಅವರನ್ನು ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಗಿರಿರಾಜ ನಾಟೀಕಾರ, ವೀರೇಂದ್ರ ಮುರಡಾ, ಮಲ್ಲಿಕಾರ್ಜುನ ಪೂಜಾರಿ, ತಾಲೂಕು ಬಜರಂಗ ದಳ ಸಂಯೋಜಕ ಶ್ರೀಕಾಂತ ಗೂಡಸೂಲ್, ರೇವಣಸಿದ್ದ ಮೋಘಾ, ಶ್ರೀಹರಿ ಕಾಟಾಪೂರ, ಹರ್ಷವರ್ಧನ್ ಮ್ಯಾಕಲ್, ದೇವಿಂದ್ರ ಬೊಕ್ಕಲ್ ಇದ್ದರು.