ಚಿಕಿತ್ಸೆ’ಗಾಗಿ ಉಡುಪಿಗೆ ಆಗಮಿಸಿದ ಕುಮಾರಸ್ವಾಮಿ

ಚಿಕಿತ್ಸೆ’ಗಾಗಿ ಉಡುಪಿಗೆ ಆಗಮಿಸಿದ ಕುಮಾರಸ್ವಾಮಿ

ಉಡುಪಿ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ಸೆಗಾಗಿ ಉಡುಪಿಯ ಹೆಲ್ತ್ ರೆಸಾರ್ಟ್ ಗೆ ಆಗಮಿಸಿದ್ದಾರೆ.

ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧಾ ರೆಸಾರ್ಟ್ ನಲ್ಲೇ 4-5 ದಿನ ತಂಗುವ ಸಾಧ್ಯತೆ ಇದೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾತ್ರಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಚಿಕಿತ್ಸೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು 5 ದಿನಗಳ ಕಾಲ ಹೆಲ್ತ್ ರೆಸಾರ್ಟ್ ನಲ್ಲೇ ತಂಗಲಿದ್ದು, ಈ 5 ದಿನವೂ ಮಾಧ್ಯಮಗಳಿಂದ ದೂರವಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos