ಚುನಾವಣಾ ಪ್ರಚಾರಕ್ಕೆ ಬಂದ ‘ರಹಸ್ಯ’ ಬಿಚ್ಚಿಟ್ಟ ದರ್ಶನ್

ಚುನಾವಣಾ ಪ್ರಚಾರಕ್ಕೆ ಬಂದ ‘ರಹಸ್ಯ’ ಬಿಚ್ಚಿಟ್ಟ ದರ್ಶನ್

ಬೆಂಗಳೂರು, . 9, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ್ದಾರೆ.

ಈ ಬಾರಿ ಮಂಡ್ಯದ ಜೊತೆಗೆ ಬೆಂಗಳೂರು ಸೆಂಟ್ರಲ್ ನಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿಯು ದರ್ಶನ್ ಪ್ರಚಾರ ನಡೆಸಿದ್ದಾರೆ.

ಮಂಡ್ಯದಲ್ಲಿ ಅಂಬರೀಶ್ ಮನೆ ಮಗನಾಗಿ ಸುಮಲತಾ ಪರವಾಗಿ ಪ್ರಚಾರ ನಡೆಸಿದ್ದಾರೆ. ಬೆಂಗಳೂರು ಸೆಂಟ್ರಲ್ ನಲ್ಲಿ ಮೋಹನ್ ಪರವಾಗಿ ತಾವು ಪ್ರಚಾರನಡೆಸಿದ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ನನ್ನ ಸ್ವಂತಕ್ಕಾಗಿ ಪ್ರಚಾರಕ್ಕೆ ಬಂದಿಲ್ಲ. ಹಲವಾರು ಮಂದಿ ಕಾಯಿಲೆ ಕಾರಣದಿಂದ ನೆರವು ಕೇಳಿಕೊಂಡು ಬರುತ್ತಾರೆ. ರಾಜಕಾರಣಿಗಳ ಶಿಫಾರಸು ಪತ್ರ ಕೊಟ್ಟರೆ ಶೇ. 30 ರಷ್ಟು ಹಣ ಅನುಕೂಲವಾಗುತ್ತೆ. ಉಳಿದ ಹಣವನ್ನು ನಾವು ಹಾಕುತ್ತೇವೆ. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos