ಚಿತ್ರದುರ್ಗದಲ್ಲಿ ಚಿರತೆ ಹಾವಳಿ

 ಚಿತ್ರದುರ್ಗದಲ್ಲಿ ಚಿರತೆ ಹಾವಳಿ

ಚಿತ್ರದುರ್ಗ, ಜು.1 : ಕಟ್ಟಿ ಹಾಕಿರುವ ಸಾಕು ಪ್ರಾಣಿಗಳಿಗೆ ಚಿರತೆ ದಾಳಿ ಮಾಡುತ್ತದೆ. ಕಾಡು ಪ್ರಾಣಿಗಳನ್ನು ಬೇಟೆಯಾಡುವ ಶ್ರಮ ತಪ್ಪಿಸಲು ಚಿರತೆಗಳು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಊರಿಗೆ ನುಗ್ಗುತ್ತಿದ್ದು, ಜನರೂ ಎಚ್ಚರ ವಹಿಸಬೇಕಾಗಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಎರಡು ಕರಡಿಗಳು ಮೃತಪಟ್ಟಿರುವ ಬೆನ್ನಲ್ಲೇ, ಹೊಸದುರ್ಗ ತಾಲೂಕಿನ ಸಾಣೇಹಳ್ಳಿ, ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿರುವ ವರದಿಯಾಗಿದೆ. ಸಾಣೇಹಳ್ಳಿಯಲ್ಲಿ ಚಿರತೆ ನಾಯಿಯನ್ನು ಹೊತ್ತೊಯ್ದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಓಬಳಾಪುರದಲ್ಲಿ ಎಮ್ಮೆ, ಕರು, ಎರಡು ನಾಯಿಗಳನ್ನು ಬಲಿ ಪಡೆದಿದ್ದು, ಎಲ್ಲ ನಿದರ್ಶನಗಳೂ ಮೇಲಿನ ವಿವರಕ್ಕೆ ಸಾಕ್ಷಿಯಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos