ಚಿತ್ರದುರ್ಗ, ಆ.13 : ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ತೀವ್ರವಾದ ಬರಗಾಲ ಮುಂದುವರಿದ ಪರಿಣಾಮ ಬರ ಛಾಯೆ ಹೆಚ್ಚುತ್ತಿದೆ. ಹೊಳಲ್ಕೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದ ಪಟ್ಟಣದ ರೈತರು ಸೋಮವಾರ ಬಯಲು ಗಣಪತಿ ಮೂರ್ತಿಗೆ ನೂರಾ ಒಂದು ಬಿಂದಿಗೆ ಅಮೃತಾ ಜಲಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ, ಬಿದ್ದ ತುಂತುರು ಮಳೆ ಬೆಳೆಗಳಿಗೆ ಸಾಕಾಗುತ್ತಿಲ್ಲ. ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಕಳೆದ ಎರಡು ತಿಂಗಳಿಂದ ಸಮರ್ಪಕ ಮಳೆ ಇಲ್ಲದೆ ತೋಟಗಾರಿಕೆ ಸೇರಿದಂತೆ ಕೃಷಿ ಬೆಳೆಗಳಿಗೆ ಸಂಪೂರ್ಣ ಮಳೆ ಕರುಣಿಸುವಂತೆ ಪ್ರಾರ್ಥಿಸಿ ಗಣಪತಿಗೆ ನೂರೊಂದು ಬಿಂದಿಗೆ ಅಮೃತಾ ಜಲಾಭಿಷೇಕ ಮಾಡಿದರು. ಕಾಲಭೈರವ ದೇವಸ್ಥಾನದ ಕನ್ನೇಕೆರೆ ಭಾವಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ಸಲ್ಲಿಸಿದ್ದಾರೆ.