ಹೈದರಾಬಾದ್, ಡಿ . 06: ಇಂದು ಬೆಳಗಿನ ಜಾವ 3: 30ಕ್ಕೆ ದಿಶಾ ಹತ್ಯೆ ಪ್ರಕರಣಕ್ಕೆ ಸಂಭದಿಸಿದ 4 ಜನ ಆರೋಪಿಗಳನ್ನ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ ಅನ್ನೋ ಸುದ್ದಿ ಕೇಳಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ರಾಕ್ಷಸರ ನಿರ್ನಾಮ ಆಯ್ತು ಅಂತ ಸಿಹಿ ಹಂಚಿ ಖುಷಿ ಪಡುತ್ತಿದ್ದಾರೆ. ವಿಜಯವಾಡದ ಶಾಲೆಯೊಂದರಲ್ಲಿ ಸಾವಿರಾರು ಹೆಣ್ಣುಮಕ್ಕಳು ಸೇರಿ ರಾಕ್ಷಸರ ಹತ್ಯೆಯಾಯ್ತು ಅಂತ ಖುಷಿಯನ್ನ ಡೋಲು ಬಾರಿಸುವ ಮುಲಕ ಸಂಭ್ರಮಿಸಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ.
ಈ ಎನ್ಕೌಂಟರ್ ಮೂಲಕ ಪೊಲೀಸರು ಎಲ್ಲಾ ಕಾಮುಕರಿಗೂ ಒಂದು ವಾರ್ನಿಂಗ್ ಕೊಟ್ಟಂತಾಗಿದೆ. ಇನ್ನೊಂದು ಸಲ ಯಾರೇ ಆದರು ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಲ್ಲಿ ನೋಡೋಕೂ ಭಯ ಪಡಬೇಕು ಎಂದು ವಿಜಯವಾಡದ ಶಾಲೆ ವಿದ್ಯಾರ್ಥಿನಿ ಸುಷ್ಮಾ ಹೇಳದರು.
ನಮಗೆ ನಿಜಕ್ಕೂ ಧೈರ್ಯ ಬಂದಿದೆ ಈಗ. ನಮ್ಗೇನಾದ್ರೂ ಆದ್ರೆ ಕಾಪಾಡೋಕೆ, ನ್ಯಾಯ ಕೊಡಿಸೋಕೆ ಪೊಲೀಸರಿದ್ದಾರೆ ಅನ್ನೋ ನಂಬಿಕೆ ಬಂದಿದೆ. ಯಾವುದೇ ಹೆಣ್ಣು ಮಗಳಿಗೆ ಏನೇ ಆದ್ರೂ ನ್ಯಾಯ ಕೊಡಿಸೋಕೆ ಇಡೀ ಸಮಾಜ, ಪೊಲೀಸರು ಇದ್ದಾರೆ ಅನ್ನೋ ಧ್ರೈಯ ನಮ್ಗೀಗ ಬಂದಿದೆ ಸರ್ ಎಂದು ತಿಳಿಸಿದರು.