‘ಕುಡುಕರಿಗೆ ಏಟು ಕೊಡುವ ಕಾನೂನು ತನ್ನಿ’

‘ಕುಡುಕರಿಗೆ ಏಟು ಕೊಡುವ ಕಾನೂನು ತನ್ನಿ’

ಬೆಂಗಳೂರು, ನ.16 : ‘ಕುಡಿದು ಓಡಾಡುವ ಪುರುಷರಿಗೆ ಎಲ್ಲ ಮಹಿಳೆಯರೂ ಏಟು ಕೊಡುವ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನೂ ಮಾಡಿಕೊಂಡಿದ್ದೆ. ಆದರೆ, ಕಾನೂನು ಮಾಡುವವರೇ ತಪ್ಪಿತಸ್ಥರಾಗಿದ್ದಾರೆ’ ಎಂದು ಕವಿ ಡಾ.ಸಿದ್ಧಲಿಂಗಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಲೀಲಾ ಸಂಪಿಗೆ ಅವರಿಗೆ ‘ಇಂದಿರಾರತ್ನ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿ ₹ 5 ಸಾವಿರ ನಗದು ಬಹುಮಾನ ಹೊಂದಿದೆ. ‘ಮಣಿಪುರದ ಇಂಫಾಲ್ಗೆ ಹೋದಾಗ ಅಲ್ಲಿ ಕುಡುಕರಿಗೆ ಸಾರ್ವಜನಿಕವಾಗಿ ಎಲ್ಲ ಮಹಿಳೆಯರು ಏಟು ನೀಡುವುದನ್ನು ನೋಡಿ, ಆ ಬಗ್ಗೆ ತಿಳಿದುಕೊಂಡೆ. ಅಲ್ಲಿನ ಮಹಿಳೆಯರಿಗೆ ಸರ್ಕಾರ ಆ ಅಧಿಕಾರ ನೀಡಿದೆ. ಹೀಗಾಗಿ ಮದ್ಯವ್ಯಸನಿಗಳ ಸಂಖ್ಯೆ ಕಡಿಮೆಯಾಗಿದ್ದು, ಜನರಿಗೆ ಭಯ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos