ದಾವಣಗೆರೆ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಅವರ ಕುಟುಂಬ ಜೊತೆಗೆ ಬಂದು ತಮ್ಮ ಮತ ಚಲಾಯಿಸಿದರು. ವಿದ್ಯಾನಗರದಲ್ಲಿರುವ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 236 ರಲ್ಲಿ ಸಿದ್ದೇಶ್ವರ್ ಮತ ಚಲಾವಣೆ ಮಾಡಿದರು. ಬಳಿಕ ಮಾತನಾಡಿದ ಅವರು, 4ನೇ ಬಾರಿಯೂ ಗೆಲ್ಲುತ್ತೇನೆ. ಅಹಿಂದ ಕಾರ್ಡ್ ಎಲ್ಲಾ ಸಮಯದಲ್ಲಿ ನಡೆಯಲ್ಲ. ಮೋದಿ ಹವಾ ಇದೆ, ಯಡ್ಡಿಯೂರಪ್ಪನವರ ಹವಾ ಇದೆ. ಕಾರ್ಯಕರ್ತರ ಹವಾನೂ ಇದೆ. ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. 4ನೇ ಬಾರಿಯೂ ಗೆದ್ದು ಜಿಲ್ಲಾ ಚೌಕಿದಾರ್ ಆಗಿ ಕೆಲಸ ಮಾಡುತ್ತೇನೆ