ಬೆಸ್ಕಾಂ ಅಧಿಕಾರಿಗಳನಿರ್ಲಕ್ಷ್ಯ: ಬಾಲಕನಿಗೆ ವಿದ್ಯುತ್ ಶಾಕ್!

ಬೆಸ್ಕಾಂ ಅಧಿಕಾರಿಗಳನಿರ್ಲಕ್ಷ್ಯ: ಬಾಲಕನಿಗೆ ವಿದ್ಯುತ್  ಶಾಕ್!

ಬೆಂಗಳೂರು , ಮೇ.16, ನ್ಯೂಸ್ಎಕ್ಸ್ ಪ್ರೆಸ್‍ : ಬೆಂಗಳೂರು ನಗರದಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿಪರೀತವಾಗಿ ಮುಂದುವರೆದಿದೆ. ನಗರದ ಮತ್ತೀಕೆರೆ ಬಳಿಯ ನೇತಾಜಿ ನಗರದಲ್ಲಿ ಮತ್ತೊಂದು ವಿದ್ಯುತ್​ ಅವಘಡ ಸಂಭವಿಸಿದೆ. ನೆತಾಜಿ ನಗರದ ನಿವಾಸಿ ರಮಾದೇವಿ- ಅಂಬರೀಶ್ ದಂಪತಿಗೆ ಸೇರಿದ ಪುತ್ರ  ನಿಖಿಲ್ (14)  ಎಂಬಾತನ್ನು ರಜೆ ಹಿನ್ನೆಲೆಯಲ್ಲಿ ಬಾಲಕ  ಮನೆಯ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಮೂರ್ಛೆ ಹೋಗಿದ್ದಾನೆ. ಶಾಕ್​ನಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನ ದೇಹ ಶೇ.40 ರಷ್ಟು ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.

ಕಳೆದ 15 ದಿನಗಳ ಅವಧಿಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಬಿಬಿಎಂಪಿ ಮೇಯರ್​ ಗಂಗಾಬಿಕೆ,ಕಾರ್ಪೊರೇಟರ್ ಜಯಪ್ರಕಾಶ್ ಮತ್ತು ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos