ತುಪ್ಪಾ ಸೇವನೇಯಿಂದ ಆಗುವ ಪ್ರಯೋಜನಗಳು

ತುಪ್ಪಾ ಸೇವನೇಯಿಂದ ಆಗುವ ಪ್ರಯೋಜನಗಳು

ಬೆಂಗಳೂರು: ತುಪ್ಪ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಒಂದು ಒಗ್ಗರಣೆಯಿಂದ ಹಿಡಿದು ಹಲವು ಸ್ವೀಟ್ಸಗಳಿಗೂ ತುಪ್ಪ ಬಳಸಲಾಗುತ್ತದೆ. ಅತಿಯಾಗಿ ತುಪ್ಪ ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮ ಎಂತಹದು ಎನ್ನುವು ಯಾರಿಗೂ ತಿಳಿದಿಲ್ಲಾ.

ನಮ್ಮ ಬಹುತೇಕ ಆಹಾರ ಪದ್ಧತಿಯಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಅಲ್ಲದೆ ಇದು ಸುಲಭವಾಗಿ ಜೀರ್ಣವಾಗುವ ಕೊಬ್ಬಿನಾಂಶವಾಗಿದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇದ್ದು, ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಹಾಗಾಗಿ ಹಿಂದಿನ ಕಾಲದಿಂದಲೂ  ತುಪ್ಪವನ್ನು ಬಹುತೇಕ ಕಾಯಿಲೆಗಳಿಗೆ ಔಷಧಿಯಾಗಿ ನೀಡಲಾಗುತ್ತದೆ.

ಜೀರ್ಣಕ್ರಿಯೆ ಸಹಾಯ ಮಾಡುತ್ತದೆ: ತುಪ್ಪದ ಜೀರ್ಣಕ್ರಿಯೆಯು ಬ್ಯುಟೈರೇಟ್‌ನಿಂದ ಬ್ಯುಟರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಇದು ಅವಶ್ಯಕವಾಗಿದೆ. ಇದು ಉರಿಯೂತದ ಔಷಧವಾಗಿದೆ ಮತ್ತು ಆಹಾರದ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಆಹಾರದಲ್ಲಿ ತುಪ್ಪ ಬಳಸುವುದರಿಂದ ಹೊಟ್ಟೆಯಲ್ಲಿನ ಇನ್ಫೆಕ್ಷನ್ ಮತ್ತು ಫುಡ್ ಪಾಯಿಸನ್ ಸಮಸ್ಯೆಯನ್ನು ನಿವಾರಿಸುತ್ತದೆ.

ರೋಗ ನಿರೋಧಕ ಶಕ್ತಿ: ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿದ್ದು, ಹೃದಯ ಹಾಗೂ ದೇಹದ ಆರೋಗ್ಯ ಕಾಪಾಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಎಲ್ಲಾ ಉತ್ತಮ ಜೀವಸತ್ವಗಳು, ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಸಲು ಮತ್ತು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆರೋಗ್ಯದ ಸಮತೋಲನ ಕಾಪಾಡುತ್ತದೆ.

ಉರಿ ನಿವಾರಿಸುತ್ತದೆ: ಆಯುರ್ವೇದದಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಔಷಧವಾಗಿ ಬಳಸಲಾಗುತ್ತದೆ. ಸುಟ್ಟ ಗಾಯಗಳಿಗೆ ತುಪ್ಪ ಹಚ್ಚುವುದರಿಂದ ಉರಿ ಕಡಿಮೆ ಆಗುವುದರ ಜೊತೆಗೆ ಗಾಯವೂ ಕಡಿಮೆಯಾಗುತ್ತದೆ. ಇದು ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುಟ್ಟ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಕೆಮ್ಮು: ಕೆಮ್ಮು ಕಡಿಮೆ ಮಾಡಲು ತುಪ್ಪ ಉತ್ತಮ ಔಷಧ ಎನ್ನಲಾಗುತ್ತದೆ. ಒಂದೆರಡು ತುಳಸಿ ಎಲೆಗೆ ಬೆಚ್ಚಗಿನ ತುಪ್ಪಕ್ಕೆ ಹಾಕಿಕೊಂಡು ತಿನ್ನುವುದರಿಂದ ಕೆಮ್ಮು ಮತ್ತು ಶೀತ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನು ಶುಂಠಿ ರಸ, ಏಲಕ್ಕಿ ಪುಡಿಯ ಜೊತೆಯೂ ಸೇವಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕೆಮ್ಮಿನ ಜೊತೆಗೆ ಹೋರಾಡುವುದಲ್ಲದೆ ದೇಹದ ದುರ್ಬಲತೆಯಾಗುವುದನ್ನು ತಡೆಯುತ್ತದೆ.

ಮಲಬದ್ಧತೆ ನಿವಾರಣೆ: ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ಏಕೆಂದರೆ ತುಪ್ಪ ಮಲಬದ್ಧತೆಯನ್ನು ನಿವಾರಿಸುವ ಗುಣ ಹೊಂದಿದೆ. ಸಾಮಾನ್ಯವಾಗಿ ಬೆಚ್ಚಗಿನ ಹಾಲಿಗೆ ತುಪ್ಪ ಹಾಕಿಕೊಂಡು ರಾತ್ರಿ ಮಲಗುವ ಮುನ್ನ ಕುಡಿಯಲಾಗುತ್ತದೆ. ಇದರಿಂದ ದೇಹ ಒಣಗುವುದು ತಡೆಯುತ್ತದಲ್ಲದೆ ಮಲಬ್ಧತೆಯನ್ನು ನಿವಾರಿಸುತ್ತದೆ.

ಮೂಳೆಗೆ ಸಹಕಾರಿ: ಶುದ್ಧ ತುಪ್ಪದಲ್ಲಿ ವಿಟಮಿನ್ ಹೆಚ್ಚಿನದಾಗಿದೆ. K2 ಇದು ಕ್ಯಾಲ್ಶಿಯಂ ಸೇರಿದಂತೆ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಆರೋಗ್ಯಕರವಾಗಿರುತ್ತವೆ. ಇದು ಸರಿಯಾದ ಹಲ್ಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಅಪಧಮನಿಗಳ ಕ್ಯಾಲ್ಸಿಫಿಕೇಶನ್ ಅನ್ನು ತಡೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos