ದೊಣ್ಣೆಯಿಂದ ಹೊಡೆದು ಬರ್ಬರ ಕೊಲೆ

ದೊಣ್ಣೆಯಿಂದ ಹೊಡೆದು ಬರ್ಬರ ಕೊಲೆ

ವಿಜಯಪುರ, ನ. 4 : ದುಷ್ಕರ್ಮಿಗಳು   ನಾಯಿಗೆ ವಿಷಹಾಕಿ ಕೊಂದ ಬಳಿಕ  ಮಾಲೀಕನನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.
ಆಲಮೇಲ ನಿವಾಸಿ ಬಸವರಾಜ್ ಗುರುಲಿಂಗಪ್ಪ ನನದಿ ಮೃತ ದುರ್ದೈವಿ. ದುಷ್ಕಮಿಗಳು ತಡರಾತ್ರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಸವರಾಜ್ ಪತ್ನಿಯನ್ನು ಹತ್ಯೆಗೈಯ್ಯಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ವೇಳೆ ಪತ್ನಿ ತೋಟದಲ್ಲಿ ಓಡಿಹೋಗಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಸಾಕಿದ್ದ ನಾಯಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದರು. ಬೆನ್ನಲ್ಲೇ ಈಗ ನಾಯಿ ಮಾಲೀಕನ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸದ್ಯ ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯಚರಣೆ ಕೈಗೊಂಡ ಪೊಲೀಸರು ಶ್ವಾನದಳದಿಂದ ದುಷ್ಕರ್ಮಿಗಳ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos