ಬೆಂಗಳೂರು, ಸೆ. 20 : ವಿಚಾರಣಾಧೀನ ಕೈದಿಯಾಗಿರುವ ಡಿಕೆ ಶಿವಕುಮಾರ್ ಅವರ ಬಳಿ ನೀಮ್ ಕರೋಲಿ ಬಾಬಾ ಅವರ ಚಿತ್ರವನ್ನಿರಿಸಿಕೊಂಡಿದ್ದಾರೆ. ದೇವತೆಗಳ ಆವಾಸ ಸ್ಥಾನ ಎನಿಸಿರುವ ಉತ್ತರಾಖಂಡದಲ್ಲಿ ಅನೇಕ ಸಾಧು ಸಂತರು ಬಾಬಾಗಳನ್ನು ಕಾಣಬಹುದು. ಉತ್ತರಾಖಂಡ್ ರಾಜ್ಯದ ಕೈಂಚಿ ಗ್ರಾಮದ ನೀಮ್ ಕರೋಲಿ ಬಾಬಾ ಈಗ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪಾಲಿಗೆ ಪರಮ ಗುರುವಾಗಿ ಕಾಣುತ್ತಿದ್ದಾರೆ. ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಅವರು ಸದ್ಯ ಬರಾಕ್ 7 ಸೆಲ್ 02ನಲ್ಲಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ನವೆಂಬರ್ ತನಕ ಕಷ್ಟಕಾಲ ಮುಂದುವರೆಯಲಿದ್ದು ನಂತರ ರಾಜಯೋಗ ಬರಲಿದೆ ಎಂಬ ಸುದ್ದಿಯಿದೆ. ಇದಕ್ಕೆ ತಕ್ಕಂತೆ ಈಗ ಬಾಬಾರ ಫೋಟೊ ಡಿಕೆಶಿ ಜೇಬಿನಲ್ಲಿ ಕಾಣಿಸಿಕೊಂಡಿದೆ.