ಕೆಚ್ಚೆದೆ ನಾಯಕರಾಳಿದ ನಾಡಿದು

ಕೆಚ್ಚೆದೆ ನಾಯಕರಾಳಿದ ನಾಡಿದು

ಹೊಸಕೋಟೆ:   ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ಶರತ್ ಬಚ್ಚೇಗೌಡ ರಿಂದ ತಾಯಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ ಮುಖಾಂತರ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ. ಕರ್ನಾಟಕ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಕೆಚ್ಚೆದೆಯ ಧೀಮಂತ ನಾಯಕರು ಹೊಯ್ಸಳರು ಕಲ್ಯಾಣ ಚಾಲುಕ್ಯರು ಇತಿಹಾಸ ಹೊಂದಿರುವ ನಮ್ಮ ನಾಡು ಬೇಲೂರು ಹಳೇಬೀಡು ಹಂಪಿ ನಮ್ಮ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸ್ಮಾರಕಗಳಾಗಿ ಉಳಿದಿವೆ ಎಂದರು.
ಕನ್ನಡ ಶ್ರೀಮಂತಿಕೆಯನ್ನು ಶ್ರೀಮಂತ ರಾಜರು ಮಹಾರಾಜರು ಕಾಲದಿಂದಲೂ ತನ್ನದೇ ಆದ ವೈಶಿಷ್ಟವನ್ನು ಪಡೆದುಕೊಂಡಿದೆ ಕನ್ನಡ ಭಾಷೆ ಉಳಿವಿಗಾಗಿ ಅದಕ್ಕೆ ಧಕ್ಕೆ ಬಂದಾಗ ಹೋರಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ದಂಡಾಧಿಕಾರಿ ಗೀತಾ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಕನ್ನಡ ಸಂಘದ ವೆಂಕಟೇಶ್, ನಗರಸಭೆ ಸದಸ್ಯರಾದ ಕೇಶವಮೂರ್ತಿ, ಗೌತಮ್, ಮೊದಲಾದವರು ಉಪಸ್ಥಿತರಿದ್ದರು
ತಾಲೂಕು ಆಡಳಿತ ನಡೆಸಿದ ಕಾರ್ಯಕ್ರಮಕ್ಕೆ ಬಹುತೇಕ ಅಧಿಕಾರಿಗಳು ಗೈರಾಗಿದ್ದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಫೋನ್ ಮುಖಾಂತರ ತಿಳಿಸಿದರು. ತಕ್ಷಣದಿಂದಲೇ ತಾಲೂಕು ದಂಡಾಧಿಕಾರಿಗಳಿಗೆ ಗೈರಾದ ಅಧಿಕಾರಿಗಳಿಗೆ ವಿರುದ್ಧ ನೋಟಿಸ್ ನೀಡುವಂತೆ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos