ಕೆ.ಆರ್.ಪುರ, ನ. 21: ಸಂತ ಶ್ರೇಷ್ಠ ಕನಕ ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಮಾಜಿ ನಗರಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಅನಂತ ರಾಮಯ್ಯ ತಿಳಿಸಿದರು.
ಸಂತ ಶ್ರೇಷ್ಠ ಕನಕ ದಾಸರ 532ನೆಯ ಜಯಂತಿ ಕಾರ್ಯಕ್ರಮವನ್ನ ಗರುಡಚಾರ್ ಪಾಳ್ಯ ವಾರ್ಡ್ ಕಾವೇರಿ ನಗರದಲ್ಲಿ ನಡೆಯಿತು.
ಸಂತ ಶ್ರೇಷ್ಠ ಕನಕದಾಸರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿ ಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಮನವಿ ಮಾಡಿದರು. ಸಂತ ಶ್ರೇಷ್ಠ ಕನಕದಾಸರು ಕಾವ್ಯ, ಗೀತೆ, ಸಂಗೀತ ಮೂಲಕ ಜಾತೀಯತೆ ಪಿಡುಗನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಡಾ. ವೆ. ಅಜಿತ್ ಕುಮಾರ್, ಮುಖಂಡರು ಟೆಂಟ್ ಹೌಸ್ ಮುನಿರಾಜು, ವೆಂಕಟ್, ಕುಶಾ, ಮಂಜುನಾಥ್, ಶಿವರಾಂ, ಮಧು ಸೇರಿದಂತೆ ಭಾಗವಹಿಸಿದ್ದರು.