ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ದರಾಗಬೇಕು

ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ದರಾಗಬೇಕು

ದೇವದುರ್ಗ: ತಾಲೂಕಿನಲ್ಲಿ ಈಗಾಗಲೇ ಪ್ರಾರಂಭಗೊಂಡಿರುವ ಗ್ರಾ.ಪಂ ಚುನಾವಣೆ ಕಾರ್ಯಕರ್ತರು ಎದುರಿಸಲು ಸನ್ನದಾರಾಗಬೇಕು ಹಾಗೂ ನಮ್ಮ ಪಕ್ಷದ ಮಾಜಿ ಪ್ರಧಾನಿ ಮಂತ್ರಿಗಳಾದ ಎಚ್.ಡಿ ದೇವೇಗೌಡರು, ಮಾಡಿರುವ ಕೃಷ್ಣ ಯೋಜನೆಯ ನೀರಾವರಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು, ಕೈಗೊಂಡಿರುವ ಜನಪ್ರಿಯ ಯೋಜನೆಗಳು ರೈತರಿಗಾಗಿ 2ಲಕ್ಷದ ವರೆಗೆ ಸಾಲ ಮನ್ನಾ ಹಾಗೂ ಬಡವರು ಅಡವಿಟ್ಟ ಆಭರಣಗಳ ಖಾಸಗಿ ಸಾಲ ಮನ್ನಾ ಮತ್ತು ಅಗ್ನಿಶಾಮಕದಳ ಬಸ್ ಡಿಪೋ ಹಲವಾರು ವಿದ್ಯಾರ್ಥಿನಿಲಯಗಳು ವಿದ್ಯುತ್ ಸಬ್ ಸ್ಟೇಷನ್ ಇನ್ನೂ ಹಲವಾರು ಕಾರ್ಯಕ್ರಮಗಳು ನಮ್ಮ ಪಕ್ಷದ ಜನಪ್ರಿಯ ಯೋಜನೆ ಜನರಿಗೆ ಮನವರಿಕೆ ಮಾಡಿದರು.
ನಮ್ಮ ಮುಂದೆ ಬಂದಿರುವ ಪಂಚಾಯಿತಿ ಚುನಾವಣೆಯನ್ನು ಪ್ರಮಾಣಿಕತೆಯಿಂದ ಎದುರಿಸಲು ಕಾರ್ಯಕರ್ತರು ಮುಂದಾಗಬೇಕೆAದು ಜನತಾದಳದ ಪಕ್ಷದ ಮುಖಂಡರು ಹಾಗೂ ಈ ಕ್ಷೇತ್ರದ ಆಕಾಂಕ್ಷೆ ಅಭ್ಯರ್ಥಿಯಾದ ಶ್ರೀಮತಿ ಕರಿಯಮ್ಮ ವಿನಾಯಕ್ ಅವರು ಕಾರ್ಯಕರ್ತರಿಗೆ ಕರೆಕೊಟ್ಟರು.
ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಕಾರ್ಯಕರ್ತರು ಸ್ಥಳೀಯ ಚುನಾವಣೆ ಎದುರಿಸಲು ಎಲ್ಲ ರೀತಿಯಿಂದ ತಯಾರಾಗಬೇಕು ಇವತ್ತಿನ ಪರಿಸ್ಥಿತಿಯಲ್ಲಿ ಸ್ಥಳೀಯ ಶಾಸಕರು ಸಂಪೂರ್ಣವಾಗಿ ತಾಲೂಕಿನ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದು ಮತ್ತು ತಾಲೂಕಿನಲ್ಲಿ ಆಡಳಿತ ಸಂಪೂರ್ಣವಾಗಿ ನೆಲಕಚ್ಚಿದ್ದು ತಾವುಗಳೆಲ್ಲರೂ ಪಕ್ಷದ ಬೆಂಬಲಿತರು ಸದಸ್ಯರನ್ನು ಗೆಲ್ಲಿಸುವ ಕಡೆ ಒತ್ತು ಕೊಡಬೇಕೆಂದು ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos