ಕೆಆರ್ ಪೇಟೆ, ನ. 30 : ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಆಧಾರಸ್ತಂಭವಾಗಿದ್ದಾರೆ. ಬೇರೆ ಪಕ್ಷಗಳ ಯಾವುದೇ ಆಮಿಷಕ್ಕೆ ಒಳಗಗಾಗದೇ ಇರುವ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ರಾಜ್ಯದಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿದೆ. ಪಕ್ಷಕ್ಕೆ ದ್ರೋಹ ಮಾಡಿದ್ದಲ್ಲದೆ, ನನ್ನ ಕುಟುಂಬವನ್ನು ಟೀಕಿಸಿದ ನಾರಾಯಣಗೌಡರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೈಮುಗಿದು ಮನವಿ ಮಾಡಿದರು.
ಬಿ.ಎಲ್.ದೇವರಾಜು ಹಾಗೂ ಕೃಷ್ಣ ಅವರು ಜೊತೆಯಾಗಿ ರಾಜಕಾರಣ ಮಾಡಿದವರು. ನನ್ನ ಕೊನೆಯ ಉಸಿರಿರುವವರೆಗೂ ರೈತರಿಗಾಗಿ, ಕಾರ್ಯಕರ್ತರ ರಕ್ಷಣೆಗಾಗಿ ಸಮಯವನ್ನು ಮೀಸಲಿಡುತ್ತೇನೆ ಹಾಗಾಗಿ ಸರಳ ಮೃದು ಸ್ವಭಾವದ ಪರಿಶುದ್ದ ರಾಜಕಾರಣಿ ಬಿ.ಎಲ್.ದೇವರಾಜು ಅವರನ್ನು ಈ ಉಪಚುನಾವಣೆಯಲ್ಲಿ ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಮತದಾರರಲ್ಲಿ ಮನವಿ ಮಾಡಿದರು.