ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕ

  • In State
  • January 5, 2021
  • 190 Views
ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕ

ಕೊಳ್ಳೇಗಾಲ: ಸತತವಾಗಿ ಸೋತಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ರವರು ಒಳ್ಳೆಯ ಕೆಲಸ ಮಾಡುತ್ತಾರೆಂದು ಕ್ಷೇತ್ರದ ಜನತೆ ಅನುಕಂಪದಿಂದ ಜನರು ಮಹೇಶ್‌ರನ್ನು ಗೆಲ್ಲಿಸಿಕೊಟ್ಟರು. ಆದರೆ ಅವರು ಯಾವುದೇ ಜನಪರ ಕೆಲಸಗಳನ್ನು ಮಾಡಲಿಲ್ಲ, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು ಜಿಲ್ಲೆಯ ಅಭಿವೃದ್ದಿಗೆ ಯಾವುದೇ ರೀತಿಯಲ್ಲೂ ಮುಂದಾಗಲಿಲ್ಲ ಎಂದು ಮಾಜಿ ಸಂಸದ ಆರ್. ಧೃವನಾರಾಯಣ್ ಹೇಳಿದರು.
ಜಿಲ್ಲೆಯ ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಸಂಸದ ಆರ್.ದೃವನಾರಾಯಣ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು
ಜಿಲ್ಲೆಯಲ್ಲಿ 1135 ಜನ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಸುಮಾರು 76 ಗ್ರಾಮ ಪಂಚಾಯ್ತಿಗಳಲ್ಲಿ ಅತೀ ಹೆಚ್ಚು ಕೊಳ್ಳೇಗಾಲ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾಗಿ ಆಯ್ಕೆಯಾಗಿರುವುದು ವಿಷೇಶ ಎಂದು ಮಾಜಿ ಸಂಸದ ಆರ್. ದೃವನಾರಾಯಣ್ ಹೇಳಿದರು.
ಈ ಭಾಗದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳು, ಮಾಜಿ ಸಂಸದ ಆರ್. ಧೃವನಾರಾಯಣ್ ಅವರ ಜನಪರ ಕಾಳಜಿಯ ಕಾರ್ಯಕ್ರಮಗಳು ಇಂದು ನಾವು ಅತೀ ಹೆಚ್ಚು ಗ್ರಾಮ ಪಂಚಾಯತಿ ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು ಎಂದು ಹೇಳಿದ ಅವರು, ಪರಾಜಿತ ಅಭ್ಯರ್ಥಿಗಳು ಯಾರೂ ಕೂಡಾ ದೃತಿಗೆಡಬಾರದು. ಪಕ್ಷ ನಿಮ್ಮ ಜೊತೆ ಸದಾ ಇರುತ್ತದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos