ಮಗು ಕೊಂದ ದಂಪತಿ

ಮಗು ಕೊಂದ ದಂಪತಿ

ಚಾಮರಾಜನಗರ : ಮದುವೆಯಾದ ಎರಡನೇ ಹೆಂಡ್ತಿಗೆ ಮಕ್ಕಳಾಗಲಿಲ್ಲ ಅಂತಾ ಹೊಟ್ಟೆಕಿಚ್ಚಿಗೆ ಮೊದಲ ಹೆಂಡ್ತಿಯ ಐದು ವರ್ಷದ ಮಗಳನ್ನು ಚೀಲದಲ್ಲಿ ತುಂಬಿ ದೇವರ ಕೋಣೆಯಲ್ಲಿ ಮಗುವಿನ ಶವವನ್ನು ಇಟ್ಟಿರುವ ಘಟನೆ ನಡೆದಿದೆ.

ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹೇಶ್ ಹಾಗು ಗೌರಮ್ಮ ದಂಪತಿಗಳು ಕೆಲ ವರ್ಷಗಳ ಹಿಂದೆ ವಿಚ್ಚೇದನಯನ್ನು ಪಡೆದಿದ್ದರು. ಮಹೇಶ್ ರತ್ನಮ್ಮ ಎಂಬುವರನ್ನು ವಿವಾಹವಾಗಿದ್ರು.

ಮಗು ಕಾಣೆಯಾಗಿರುವ ಬಗ್ಗೆ ಮಹದೇವಸ್ವಾಮಿ,ಗೌರಮ್ಮ ದಂಪತಿ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು. ತದನಂತರ ಪೊಲೀಸರು ರಾತ್ರಿಯೇ ಕಾರ್ಯಪ್ರವೃತ್ತರಾಗಿ ಮಗು ಕಾಣೆಯಾದ ಬಗ್ಗೆ ಮಹೇಶ್ ಹಾಗು ರತ್ನಮ್ಮ ದಂಪತಿ ಮೇಲೆ ಅನುಮಾನ ವ್ಯಕ್ತವಾಗಿದೆ.

ಆದರಿಂದ ಪೊಲೀಸರು ದಂಪತಿ ಮನೆಗೆ ತೆರಳಿ ಪರಿಶೀಲಿಸಿದಾಗ ದೇವರ ಕೋಣೆಯಲ್ಲಿ ಮಗುವಿನ ಶವ ಚೀಲದಲ್ಲಿ ಪತ್ತೆಯಾಗಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos