ರಾಮನಗರ, ಅ. 9 : ಏಳು ತಲೆ ಸರ್ಪದ ಪೊರೆ ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದೆ. ಕನಕಪುರ ತಾಲೂಕಿನ ಮರಿಗೌಡನ ದೊಡ್ಡಿಯಲ್ಲಿ ಪತ್ತೆ. 6 ತಿಂಗಳ ಹಿಂದೆ ಇದೇ ಜಾಗದಲ್ಲಿ 7ತಲೆ ಸರ್ಪದ ಪೊರೆ ಕಾಣಿಸಿಕೊಂಡಿದೆ. ಮತ್ತೆ ದೇವಸ್ಥಾನದ ಪಕ್ಕದಲ್ಲೇ ಪೊರೆ ಕಂಡುಬಂದಿರುವುದು ಕುತೂಹಲಕ್ಕೆ ಕಾರಣ. ಬಾಳಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ದೇವಸ್ಥಾನದ ಸುತ್ತಲೂ ಕಸ ಗುಡಿಸುತ್ತಿದ್ದಾಗ ದೇವಸ್ಥಾನದಿಂದ ಹತ್ತು ಅಡಿ ದೂರದಲ್ಲಿ ಪೊರೆ ಪತ್ತೆಯಾಗಿದೆ. ಪೊರೆ ನೋಡಲು ಅಕ್ಕ-ಪಕ್ಕದ ಊರಿನ ಜನರು ಸಾಲು ಸಾಲಾಗಿ ಆಗಮಿಸುತ್ತಿದ್ದಾರೆ.