ಹೊಸಕೋಟೆ, ಸೆ. 5: ದೆಹಲಿಯ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರವರನ್ನು ಇಡಿ ಅದಿಕಾರಿಗಳು ಬಂದಿರಿಸಿರುವ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅಭಿಮಾನಿಯೊಬ್ಬರು 101 ತೆಂಗಿನಕಾಯಿ ವೊಡೆದು ಸೋಮೇಶ್ವರನಿಗೆ ವಿಶೆಷ ಪೂಜೆ ಸಲ್ಲಿಸಿ, ಅತೀ ಶೀಘ್ರದಲ್ಲಿ ಬಿಡುಗಡೆಯಾಗಲೆಂದು ಬೇಡಿಕೊಂಡಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಪೂಜೇನಗ್ರಹಾರದ ಪಿ.ಕೆ.ಪ್ರಭಾಕರ್, ಕಾಂಗ್ರೇಸ್ ಕಟ್ಟಾಳು ಕೆ,ಮಲ್ಲಸಂದ್ರ ಗ್ರಾಮದ ಪುರಾತನ ಕಾಲದ ಕಟ್ಟೆ ಸೋಮೇಶ್ವರ ದೇವಾಲಯಕ್ಕೆ ತೆರಳಿ 101 ತೆಂಗಿನಕಾಯಿ ವೊಡೆದು ಸೋಮೇಶ್ವರನಿಗೆ ವಿಶೆಷ ಪೂಜೆ ಸಲ್ಲಿಸಿ, ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರವರು ಒಬ್ಬ ಪ್ರಾಮಾಣಿಕರ ವ್ಯಕ್ತಿ ರಾಜಕಾರಣ ಬಿಟ್ಟು ಬೇರೆ ಯಾವುದೇ ಹಗರಣ ಅಥವಾ ಕಪ್ಪು ಚುಕ್ಕೆ ಇಲ್ಲ. ಇವರು ಪ್ರಾಮಾಣಿಕ ಕಾಂಗ್ರೇಸ್ ಕಟ್ಟಾಳು ಆಗಿ ಕೆಲಸ ಮಾಡುತ್ತಿದ್ದು, ಟ್ರಬಲ್ ಶೂಟರ್ ಎಂದು ಹೆಸರು ಪಡೆದಿದ್ದರು. ಇದನ್ನು ಸಹಿಸದ ಬಿಜೆಪಿಯ ಪ್ರಭಾವಿ ನಾಯಕರು ಬಿಜೆಪಿ ಪಕ್ಷಕ್ಕೆ ಸೆಳೆಯಲು ಪ್ರಯತ್ನ ಮಾಡಿದರು ಇದಕ್ಕೆ ಬಗ್ಗದ ಡಿ.ಕೆ.ಶಿವಕುಮಾರ್ ರವರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಈಗ ಬಂದಿಸಿದ್ದಾರೆ. ಇದು ಕೇವಲ ರಾಜಕೀಯ ಕುತಂತ್ರ ಆದ್ದರಿಂದ ನಾವು ಹಾಗು ನಮ್ಮ ಗ್ರಾಮಸ್ಥರು ಸೇರಿ ಈ ವಿಶೇಷ ಪೂಜೆ ಮಾಡಿದ್ದು, ಅವರು ಆದಷ್ಟು ಬೇಗ ಬಂದನದಿಂದ ಮುಕ್ತಿ ಪಡೆಯುತ್ತಾರೆ ಎಂದರು. ಈ ಸಂದರ್ಭದಲ್ಲಿ ಹರಳುರು ರವಿ, ಜಡಿಗೇನಹಳ್ಳಿ ಜೆಆರ್ಡಿ ಮಂಜುನಾಥ್, ಮಲ್ಲಸಂದ್ರ ಸಂತೋಷ್ ಹಾಗು ಇತರೆ ಮುಖಂಡರಿದ್ದರು.