ಶೋಕಿಗಾಗಿ ಸಹನಟ ಮಾಡಿದ್ದೇನು ಗೊತ್ತಾ..?

ಶೋಕಿಗಾಗಿ ಸಹನಟ ಮಾಡಿದ್ದೇನು ಗೊತ್ತಾ..?

ಬೆಂಗಳೂರು, ಜ. 8 : ಸಿಲಿಕಾನ್ ಸಿಟಿಯಲ್ಲಿ ಕಾರ್ ಬುಕ್ ಮಾಡಿ ಬಳಿಕ ಅದೇ ಕಾರನ್ನು ಕಳ್ಳತನ ಮಾಡೋಕೆ ಯತ್ನಿಸಿದ ಕರಣ್ ಕುಮಾರ್ ಎಂಬಾತಾನನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತನಿಂದ 22 ಲಕ್ಷ ಮೌಲ್ಯದ ಇನ್ನೋವಾ ಕ್ರಿಸ್ತಾ ಮತ್ತು ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹುಡುಗೀಯರಿಗಾಗಿ ಪಬ್ಗಳಿಗೆ ಹೋಗಿ ಶೋಕಿ ಮಾಡ್ತಿದ್ದ ಕರಣ್ಕುಮಾರ್, ಕದ್ದ ಕಾರನ್ನು ಮಾರಿ ಬಂದ ಹಣವನ್ನ ಹೆಣ್ಣು ಮಕ್ಕಳಿಗೆ ಖರ್ಚು ಮಾಡ್ತಿದ್ದ. ಮೊನ್ನೆ ಅರುಣ್ ಎಂಬಾತನ ಕಾರಿಗೆ ಕೈ ಹಾಕಿದವನು ಈಗ ಬಂಧಿಯಾಗಿದ್ದಾನೆ.

ಕನ್ನಡದ ಹಲವು ಧಾರಾವಾಹಿಗಳಲ್ಲಿ ಸಹನಟನಾಗಿ ನಟಿಸಿರುವ ಕರಣ್ ಈ ಹಿಂದೆ ದಾವಣಗೆರೆಯಲ್ಲಿ ನಡೆದ ಕೊಲೆ ಪ್ರಕರಣ ಆರೋಪಿ. ಜಾಮೀನು ಪಡೆದು ಹೊರಗಡೆ ತಿರುಗುತ್ತಿದ್ದವನಿಗೆ ಹುಡುಗುಗೀಯರಿಗೆ ಹಣ ಖರ್ಚು ಮಾಡುವ ಚಾಳಿ. ಇನ್ನು ಹಣಕ್ಕಾಗಿ ಈತ ಟ್ರಾವೆಲ್ಸ್ ಗಾಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ.ಕಳೆದ ವಾರ ಜಸ್ಟ್ ಡಯಲ್ಗೆ ಕರೆ ಮಾಡಿ ಮೈಸೂರಿಗೆ ಹೋಗೋದಕ್ಕೆ ಗಾಡಿ ಬುಕ್ ಮಾಡಿದ್ದ. ಅರುಣ್ ಎಂಬ ಡ್ರೈವರ್ ಸ್ಪಾಟ್ಗೆ ಬರುತ್ತಿದ್ದಂತೆ ಕಾರಿನ ಒಳಗಡೆ ಕೂತು ರೂಮಲ್ಲಿ 10 ಸಾವಿರ ಅಮೌಂಟ್ ಕೊಡ್ತಾರೆ ತಗೊಂಡು ಬಾ ಎಂದು ಕಳುಸುತಿದ್ದ. ಇವನನ್ನ ನಂಬಿದ ಡ್ರೈವರ್, ಲಾಡ್ಜ್ ಒಳಗೆ ಹೋದರೆ, ಡ್ರೈವರ್ ಹೊರ ಬರುವಷ್ಟರಲ್ಲಿ ಗಾಡಿ ತೆಗೆದಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿ ಅಲ್ಲಿಂದ ಎಸ್ಕೇಪ್ ಆಗ್ತಿದ್ದ

ಇನ್ನು ಖದೀಮ ಕದ್ದ ಕಾರುಗಳನ್ನ ತಮಿಳುನಾಡಿಗೆ ಸಾಗಿಸಿ ಮಾರಾಟ ಮಾಡ್ತಿದ್ದ ಎನ್ನಲಾಗಿದೆ. ಸದ್ಯ ಬಂಧಿತನಿಂದ ಮತ್ತೊಂದು ಕಾರು ರಿಕವರಿಯಾಗಿದ್ದು, ಬ್ಯಾಟರಾಯನಪುರ ಪೊಲೀಸರು ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos