ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಈ ಉದ್ಯಾನ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಈ ಉದ್ಯಾನ

ವಿಜಯಪುರ, ಡಿ. 26 : ಕಣ್ಮನ ಸೆಳೆಯುವ ಉದ್ಯಾನ. ಇಲ್ಲಿಗೆ ಬಂದರೆ ಸಾಕು ಎಲ್ಲರೂ ವ್ಹಾವ್ ಎಂದು ಹೇಳದೆ ಇರಲು ಸಾಧ್ಯವೇ ಇಲ್ಲ. ಈಗ ಹೇಳಿ ಕೇಳಿ ವರ್ಷಾಂತ್ಯದ ಸಮಯ. ಹಲವಾರು ಶಾಲೆ-ಕಾಲೇಜುಗಳಿಗೆ ರಜೆ. ಈ ಸಮಯವನ್ನು ಅದರಲ್ಲೂ ಮಕ್ಕಳು ಮತ್ತು ಇಡೀ ಕಟುಂಬ ಹಾಗೂ ಸ್ನೇಹಿತರೊಡನೆ ಎಂಜಾಯ್ ಮಾಡಬೇಕೇಂದರೆ ಈ ಉದ್ಯಾನಕ್ಕೆ ಬರಲೇಬೇಕು. ಈಗಷ್ಟೇ ಅಲ್ಲ, ಬೇಸಿಗೆ ಮತ್ತು ದಸರಾ, ದೀಪಾವಳಿ ರಜೆಗಳ ಸಂದರ್ಭಗಳಲ್ಲಿಯೂ ಇಲ್ಲಿಗೆ ಬಂದರೆ ತೊಂದರೆಯೇನಿಲ್ಲ.

ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡದಾದ ಜಲಾಶಯದ ಆವರಣದಲ್ಲಿದೆ ಒಂದು ಸುಂದರ ಉದ್ಯಾನ. ಸುಮಾರು 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನಕ್ಕೆ ಕಾಲಿಟ್ಟರೆ ಸಾಕು ಪ್ರವಾಸಿಗರು ಬೇರೆಲ್ಲಿಗೊ ಬಂದಂತೆ ಭಾಸವಾಗುತ್ತದೆ. ಬಸವನಾಡು ಬರದ ಬೀಡಿನಲ್ಲಿರುವ ಈ ಗಾರ್ಡನ್ ನೋಡಬೇಕೆಂದರೆ ಒಂದು ದಿನ ಸಾಲದು. ಇಂಥದ್ದೊಂದು ಸುಂದರ ಉದ್ಯಾನ ಬಸವನಾಡು ಬರದ ಬೀಡಿನಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos