ಪಕ್ಷೇತರ ಅಭ್ಯರ್ಥಿಗೆ ಟಿಪ್ಪು ಸೆಕ್ಯೂಲರ್ ಬೆಂಬಲ

ಪಕ್ಷೇತರ ಅಭ್ಯರ್ಥಿಗೆ ಟಿಪ್ಪು ಸೆಕ್ಯೂಲರ್ ಬೆಂಬಲ

ಕೋಲಾರ: ಟಿಪ್ಪು ಸೆಕ್ಯೂಲರ್ ಸೇನೆಯ ರಾಜ್ಯಾಧ್ಯಕ್ಷ ಆಸೀಫ್‌ವುಲ್ಲಾ ಅಧ್ಯಕ್ಷತೆಯಲ್ಲಿ ಕೋಲಾರ ನಗರದ ಲಿಮ್ರಾಸ್ ಸಭಾಂಗಣದಲ್ಲಿ ಟಿಪ್ಪು ಜಯಂತಿ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಲಿತ ಹೋರಾಟಗಾರ ವಕೀಲ ಜಿ ವೆಂಕಟಾಚಲಪತಿ ಅವರಿಗೆ ಬೆಂಬಲ ಸೂಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಜಿ. ವೆಂಕಟಾಚಲಪತಿ ಅವರು ದಲಿತ ಹೋರಾಟಗಾರರು ಹಾಗೂ ವಕೀಲರಾಗಿದ್ದು, ಎಲ್ಲಾ ವರ್ಗದವರ ಜೊತೆ ಹಾಗೂ ಅವರ ಸಮಸ್ಯೆಗಳ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲಾ ವರ್ಗದವರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಜಿಲ್ಲೆಯ ಪದವೀಧರರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಮತ್ತು ಸ್ಪಂದಿಸುವ ಗುಣವಿದೆ. ಅವರು ಸ್ಥಳೀಯ ಅಭ್ಯರ್ಥಿಯಾಗಿದ್ದಾರೆ. ಅನೇಕ ಜನಪರ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಇವರಿಗೆ ಟಿಪ್ಪು ಸೆಕ್ಯೂಲರ್ ಸೇನೆಯು ಬೆಂಬಲ ವ್ಯಕ್ತ ಪಡಿಸುವ ಬಗ್ಗೆ ಪಧಾದಿಕಾರಿಗಳೆಲ್ಲರೂ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದರು.
ರಾಜ್ಯಾಧ್ಯಕ್ಷ ಅಸೀಫ್‌ವುಲ್ಲಾ ಮಾತಾನಾಡಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸುಮಾರು ಐದು ಜಿಲ್ಲೆಗಳ ಒಟ್ಟು ಒಂದು ಲಕ್ಷದ ಒಂಬತ್ತು ಸಾವಿರ ಮತದಾರರಿದ್ದು, ಅದರಲ್ಲಿ ಬಹುತೇಕ ಪದವೀಧರ ಮಾತದಾರರರು ನಿರುದ್ಯೋಗಿಗಳಾಗಿದ್ದು ಅವರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಶಕ್ತಿ ಇರುವಂತಹ ವ್ಯಕ್ತಿ ಜಿ. ವೆಂಕಟಾಚಲಪತಿರವರು. ಹಾಗೂ ಅವರು ಕಾನೂನು ಪದವಿ ಹಾಗೂ ಎಂಎಸ್‌ಡಬ್ಲ್ಯೂ ಸಾತ್ನಕೋತ್ತರ ಪದವಿ ಪಡೆದಿದ್ದು, ವಿದ್ಯಾವಂತ ಹಾಗೂ ಕಾನೂನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡಿರುವ ಇವರಿಗೆ ವಿಧಾನ ಪರಿಷತ್ತಿಗೆ ಹೋಗಲು ಎಲ್ಲಾ ರೀತಿಯ ಅರ್ಹತೆ ಇದೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos