ಸರಕಾರದ ಆದೇಶಕ್ಕೆ ಕಿಮ್ಮತಿಲ್ಲ 

ಸರಕಾರದ ಆದೇಶಕ್ಕೆ ಕಿಮ್ಮತಿಲ್ಲ 

ಬಾಗಲಕೋಟೆ, ಮಾ. 30: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್-19 ಎಂಬ ಕೊರೊನಾ ಭಯಾನಕ ಈಗ ಭಾರತಕ್ಕೆ ಬಂದು ಹಲವಾರು ರಾಜ್ಯಗಳಲ್ಲಿ ಕಂಡು ಬಂದಿದ್ದು, ಪ್ರಧಾನ ಮಂತ್ರಿಗಳು ಸಹ ಒಂದು ವಾರದ ಹಿಂದೆ ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದರು ಮಹಾಲಿಂಗಪುರ ಪಟ್ಟಣದಲ್ಲಿ ಈ ಲಾಕ್ ಡೌನ್ ಗೆ ಸ್ಪಂದಿಸದೇ ಉಲ್ಲಂಘನೆ ಮಾಡಿ, ಸರಕಾದ ಆದೇಶಕ್ಕೆ ಕಿಮ್ಮತಿಲ್ಲ. ಹೌದು ಈಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂತಹ ಕೋವಿಡ್-19 ಕೊರೊನಾ ವೈರಸ್ ಎಂಬ ಭಯಾನಕ ಮಾಹಾಮಾರಿ ರೋಗ ಕೆಲವು ದೇಶಗಳನ್ನು ಆವರಿಸಿ ಈಗ ಭಾರತಕ್ಕೆ ಬಂದಿರುವುದರಿಂದ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪ್ರಧಾನ ಮಂತ್ರಿಗಳ ಮೂಲಕ ಇಡಿ ದೇಶವನ್ನೆ ಲಾಕ್ ಡೌನ್ ಮಾಡಲಾಗಿದೆ.

ಇದಕ್ಕೆ ಸಾರ್ವಜನಿಕರು ಸಹ ಬೆಂಬಲಿಸುವ ಪ್ರಯತ್ನ ಮಾಡಿದರು ಕೆಲವು ಪಟ್ಟಣಗಳಲ್ಲಿ ಲಾಕ್ ಡೌನ್ ಉಲ್ಲಂಗಿಸುತ್ತಿರುವು ಕಂಡು ಬರುತ್ತಿದೆ. ಲಾಕ್ ಡೌನ್ ಯಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ದಿನನಿತ್ಯ ಬಳಸುವ ವಸ್ತುಗಳ ಖರೀದಿಸಲು ಮತ್ತು ಬ್ಯಾಂಕುಗಳನ್ನು ಎಂದಿನಂತೆ ತೆರೆದು ಕಾರ್ಯ ನಿರ್ವಹಿಸಿವ ಆದೇಶ ಇದ್ದರು, ಇದನ್ನು ಸಾರ್ವಜನಿಕರ ನಿರ್ಲಕ್ಷ್ಯವೋ…. ಬ್ಯಾಂಕಿನವರ ನಿರ್ಲಕ್ಷ್ಯವೋ …. ಈ ಕೊರೊನಾ ವೈರಸ್ ಬಗ್ಗೆ  ಸರಿಯಾದ ರೀತಿಯಲ್ಲಿ ತಿಳುವಳಿಕೆ ನೀಡದೆ ಜನರ ಮದ್ಯ ಅಂತರದ ಮಾರ್ಕಗಳನ್ನು ಹಾಕದೆ ನಿರ್ಲಕ್ಷ್ಯ ಕಂಡು ಬಂದಿರುವು ಮಹಾಲಿಂಗಪುರ ಪಟ್ಟಣದ ಕೆಲವು ಬ್ಯಾಂಕ ಗಳಲ್ಲಿ ಮತ್ತು ಸಾರ್ವಜನಿಕರು ಎಂದಿನಂತೆ ಬೈಕ್ ಗಳ ಮೇಲೆ ಅನವಶ್ಯಕ ಓಡಾಡುತ್ತಿರುವುದು, ಸಂಜೆಯಾದರೆ ಸಾಕು ಗುಂಪು ಗುಂಪಾಗಿ ಕುಳಿತು ಹರಟೆ ಹೋಡೆಯುವುದು ಕೂಡಾ ಕಂಡು ಬರುತ್ತಿದೆ. ಇನ್ನಾದರು ಸಂಭಂದಿಸಿದ ಇಲಾಖೆಯವರು ಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಪ್ರಜ್ಞಾವಂತರು ಅಳಲು ತೊಡಿಕೋಳ್ಳತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos