ನೆಲಮಂಗಲ, ಡಿ. 06: ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಇಂದು ನಸುಕಿನ ವೇಳೆ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.
ಪೊಲೀಸರಿಗೆ ಬಿಗ್ ಸೆಲ್ಯೂಟ್ ಹೊಡೆದ ಹಿರಿಯ ನಟಿ. ಪ್ರಿಯಾಂಕ ರೆಡ್ಡಿ ಮೇಲಾದ ಅತ್ಯಾಚಾರಕ್ಕೆ ಕಣ್ಣೀರು ಹಾಕಿದ ಹಿರಿಯ ಜೀವ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ, ಕಾಮುಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ ಪೊಲೀಸರು ನೆಲಮಂಗಲದಲ್ಲಿ ಹಿರಿಯನಟಿಯ ತಮ್ಮ ಮನದಾಳದ ಮಾತು ಹೇಳಿದ್ದಾರೆ. ಇನ್ನಷ್ಟು ಕಠಿಣ ಕಾನೂನು ಜಾರಿಗೆ ಬರಬೇಕು ಅತ್ಯಾಚಾರಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ ಇದಕ್ಕೆ ನನ್ನ ಸೆಲ್ಯೂಟ್ ಹೇಳಿದ ಹಿರಿಯ ನಟಿ ಲೀಲಾವತಿ. ಇಂದು ವೈದ್ಯೆಯ ಆತ್ಮಕ್ಕೆ ಶಾಂತಿ ಸಿಕ್ಕಿದೆ, ಅವರ ಪೋಷಕರಿಗೆ ದುಃಖ ಬರಿಸುವ ಶಕ್ತಿಯನ್ನ ನೀಡಿ ಆ ಭಗವಂತ ನೀಡಲಿ ಎಂದು ಪ್ರಿಯಾಂಕಾ ರೆಡ್ಡಿ ನೆನೆದು ಕಣ್ಣೀರು ಹಾಕಿದರು.