ಸರ್ಜಿಕಲ್ ದಾಳಿ ಬಗ್ಗೆ ಅತೀಯಾದ ಪ್ರಚಾರದ ಅಗತ್ಯವಿಲ್ಲವಾಗಿತ್ತು: ಹೂಡಾ

ಸರ್ಜಿಕಲ್ ದಾಳಿ ಬಗ್ಗೆ ಅತೀಯಾದ ಪ್ರಚಾರದ ಅಗತ್ಯವಿಲ್ಲವಾಗಿತ್ತು: ಹೂಡಾ

ನವದೆಹಲಿ: ಭಾರತೀಯ ಸೇನಾಪಡೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯಗೊಳಿಸಿದ್ದಲ್ಲದೇ, ಅತಿಯಾದ ಪ್ರಚಾರ ನೀಡಲಾಗಿದೆ ಎಂದು ಸರ್ಜಿಕಲ್ ದಾಳಿಯಲ್ಲಿ ಅಂದು ಪಾಲ್ಗೊಂಡಿದ್ದ ಲೆಫ್ಟಿನೆಂಟ್(ನಿವೃತ್ತ) ಡಿಎಸ್ ಹೂಡಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸೇನಾ ದೃಷ್ಟಿಕೋನದಲ್ಲಿ ದಾಳಿ ತುಂಬಾ ಅಗತ್ಯವಾದದ್ದು, ಆದರೆ ಭಾರತದಲ್ಲಿ ಸರ್ಜಿಕಲ್ ದಾಳಿ ಘಟನೆಯನ್ನು ರಾಜಕೀಯವಾಗಿ ಮತ್ತು ಅತೀಯಾದ ಪ್ರಚಾರದ ಮೂಲಕ ಬಿಂಬಿಸಲಾಯಿತು ಎಂದು ಎಎನ್ ಐ ಜೊತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಉರಿ ಸೆಕ್ಟರ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತೀಯ ಸೇನಾಪಡೆ 2016ರ ಸೆಪ್ಟೆಂಬರ್ 29ರಂದು ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ನೆರೆಯ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos