ಜೆಡಿಎಸ್‍, ಕಾಂಗ್ರೆಸ್‍ ನಾಯಕರನ್ನು ಕುಟುಕಿದ ಸುಮಲತಾ!

ಜೆಡಿಎಸ್‍, ಕಾಂಗ್ರೆಸ್‍ ನಾಯಕರನ್ನು ಕುಟುಕಿದ ಸುಮಲತಾ!

ಬೆಂಗಳೂರು, ಮೇ. 24, ನ್ಯೂಸ್‍ ಎಕ್ಸ್ ಪ್ರೆಸ್‍: ಜೆಡಿಎಸ್‍ ತವರು ಮಂಡ್ಯದಲ್ಲಿ ಹೀನಾಯ ಸೋಲುಂಡಿದೆ. ನಿಖಿಲ್‍ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್‍ 90 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಮಂಡ್ಯ ಗೆಲುವಿನ ಹಿನ್ನೆಲೆಯಲ್ಲಿ ಇವತ್ತು ಸುಮಲತಾ ಅಂಬರೀಶ್‍, ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್‍ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ರು.

‘ನೆಗೆಟಿವ್’ ರಾಜಕಾರಣಕ್ಕೆ ಜನರು ಪಾಠ ಕಲಿಸಿದ್ದಾರೆ!

ನಂತರ ಮಾಧ್ಯಮಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್‍, ನೆಗೆಟಿವ್ ರಾಜಕಾರಣಕ್ಕೆ ಮಂಡ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂದಿದ್ದೆ, ಈಗ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಜೆಡಿಎಸ್‍ ನಾಯಕರಿಗೆ ಕುಟುಕಿದ್ದಾರೆ. ಬಿಜೆಪಿ ಪರ ಇಷ್ಟು ಸ್ಥಾನ ಬರುತ್ತೆ ಎಂದು ಒಂದು ಸುನಾಮಿ ಅಲ್ಲ, 10 ಸುನಾಮಿ ಆಗಿದೆ ಎಂದು ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.ನನ್ನ ಗೆಲುವಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ಮಂಡ್ಯ ಟಿಕೆಟ್‍ ನೀಡುವಂತೆ ಕಾಂಗ್ರೆಸ್‍ಗೆ ಮನವಿ ಮಾಡಿದ್ದೆ. ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೇ.29 ಅಂಬರೀಶ್‍ ಜನ್ಮಾಚರಣೆ ಮಾಡುತ್ತೇವೆ. ಅಭಿಲಾಶ್‍ ಸಿನಿಮಾದಲ್ಲಿ ನಟಿಸ್ತಿದ್ದಾನೆ. ಸದ್ಯ ಅಭಿಷೇಕ್‍ ರಾಜಕೀಯಕ್ಕೆ ಬರೋದಿಲ್ಲ. ಯಾವುದೇ ತೀರ್ಮಾನಗಳಿದ್ದರೂ ಮಂಡ್ಯ ಜನರ ಅಭಿಪ್ರಾಯ ಕೇಳಿ ಮುನ್ನಡೆಯುತ್ತೇವೆಎ ಎಂದು ತಿಳಿಸಿದ್ದಾರೆ.

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos