ಸಚಿವ ಮಾಧುಸ್ವಾಮಿ ವಿರುದ್ಧ ಹೆಚ್.ಡಿ.ಕೆ ಕಿಡಿ

ಸಚಿವ ಮಾಧುಸ್ವಾಮಿ ವಿರುದ್ಧ ಹೆಚ್.ಡಿ.ಕೆ ಕಿಡಿ

ಬೆಂಗಳೂರು, ಅ.22 : ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಹೆಡಿ ಕುಮಾರಸ್ವಾಮಿ ಆಕ್ರೋಶವಾಗಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆರೆ ಪೀಡಿತರು ಮನೆ ಕಳೆದುಕೊಂಡರವರಿಗೆ ಇನ್ನು ಸರ್ಕಾರ ಮನೆಕೊಟ್ಟಿಲ್ಲ, ತುಮಕೂರಿಗೆ ನೀರು ಹರಿಸಿಲ್ಲ ಅಂತ ಟೀಕೆ ಮಾಡುವ ಮಂತ್ರಿಗಳಿಗೆ ಈಗ ಗೊತ್ತಾಗಿಲ್ವಾ? ಗೌಡರ ಬಗ್ಗೆ ಮಾತನಾಡುತ್ತಿದ್ದವರು ಈಗ ಯಾಕೇ ಮಾತನಾಡುತ್ತಿಲ್ಲ, ಮೊದಲು ಚಿಲ್ಲರೆ ರಾಜಕಾರಣ ಬಿಡಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ದ ಕುಮಾರಸ್ವಾಮಿ ಅವರು ಕಿಡಿಕಾರಿದರು.
ದೊಡ್ಡ ಮಟ್ಟದ ಅನಾಹುತ ಕರ್ನಾಟಕದಲ್ಲಿ ಆಗಿದೆ, ಪರಸ್ಪರ ಕೆಸರು ಎರೆಚಾಟದಿಂದ ಬೀದಿಯಲ್ಲಿ ಜನ ಪರದಾಡುತ್ತಿದ್ದಾರೆ, ನಾನು ಕೆಲ ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಚುನವಾಣೆಯಂದು ಕರ್ನಾಟಕಕ್ಕೆ 15 ಬಾರಿ ಬಂದರು. ನೆರೆ ಹಾವಳಿಯಲ್ಲಿ ಸಂಪೂರ್ಣ ಆತ್ಮ ಸ್ಥೈರ್ಯ ಕಳೆದುಕೊಂಡ ಜನರಿಗೆ ಧೈರ್ಯ ಹೇಳಲಿಲ್ಲ ಆದರೆ ಮಹಾರಾಷ್ರ್ಟಕ್ಕೆ ಚುನವಾಣೆ ಪ್ರಚಾರಕ್ಕೆ ಹೋಗಿ ನೀರಾವರಿ ಬಗ್ಗೆ ಮಾತನಾಡುತ್ತಾರೆ ಎಂದು ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos