ರೌಡಿ ಲಕ್ಷ್ಮಣ ಕೊಲೆಯ ಆರೋಪಿ ಮೇಲೆ ಪೊಲೀಸ್ ಫೈರಿಂಗ್

ರೌಡಿ ಲಕ್ಷ್ಮಣ ಕೊಲೆಯ ಆರೋಪಿ ಮೇಲೆ ಪೊಲೀಸ್ ಫೈರಿಂಗ್

 

ಬೆಂಗಳೂರು ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ರೌಡಿ ಎಂದೆ ಹೆಸರು ಮಾಡಿದ್ದ ಲಕ್ಷ್ಮಣ, ಇವರ ಕೊಲೆಯ ಪ್ರಕರಣ ಪ್ರಮುಖ ಆರೋಪಿ ಕ್ಯಾಟ್ ರಾಜಾನ ಮೇಲೆ ಇಂದು ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ರೌಡಿ ಲಕ್ಷ್ಮಣನ ಕೊಲೆಯಾಗಿ ಆಗಲೇ 2 ದಿನ ಕಳೆದಿದೆ ಪೊಲೀಸರು ಅಪರಾಧಿಗಳ ಹುಡುಕಾಟದಲ್ಲಿರುವಾಗ ಕ್ಯಾಟ್ ರಾಜ ಪೊಲೀಸರ ಕಣ್ಣಿಗೆ ಬಿದ್ದಿದ್ದ, ಉಳಿದ ಆರೋಪಿಗಳನ್ನು ತೋರಿಸುವಂತೆ ಪೊಲೀಸರು ಕೇಳಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಷ್ಟೇ ಅಲ್ಲದೆ ಮುಖ್ಯ ಪೇದೆ ಚೌಡೇಗೌಡರ ಮೇಲೆ ಹಲ್ಲೆ ನಡೆಸಿದ್ದ. ಅದಕ್ಕಾಗಿ ಆತ್ಮರಕ್ಷಣೆಗೆ ಪ್ರಶಾಂತ್ ಎನ್ನುವವರು ಕ್ಯಾಟ್ ರಾಜನ 2 ಕಾಲಿಗೂ ಗುಂಡು ಹಾರಿಸಿದ್ದಾರೆ.

ರೌಡಿ ಲಕ್ಷ್ಮಣನನ್ನು ಮಹಾಲಕ್ಷ್ಮೀ ಲೇಔಟ್ನ ಇಸ್ಕಾನ್ ದೇವಸ್ಥಾನದ ಬಳಿ ಮಾರಕಾಸ್ತ್ರಗಳಿಂದ ಕೊಲೆ ಗೈದಿದ್ದರು. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.

ಲಕ್ಷ್ಮಣ ಇಸ್ಕಾನ್ ಬಳಿ ಇರುವ ಹೋಟೆಲ್ ಗೆ ಬರುವುದು ಮುಂಚಿತವಾಗಿಯೇ ದುಷ್ಕರ್ಮಿಗಳಿಗೆ ತಿಳಿದು ಬಂದಿತ್ತು. ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಲಕ್ಷ್ಮಣನನ್ನು ಕೊಲೆ ಮಾಡಿದ್ದರು. ಲಕ್ಷ್ಮಣ ಮೃತ ದೇಹದ ಬಳಿ ಆತ ಬುಕ್ ಮಾಡಿದ್ದ ಹೋಟೆಲ್ ರೂಮಿನ ಕೀ ಕೂಡ ಪತೆಯಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos