ದೇವದುರ್ಗ: ಐತಿಹಾಸಿಕ ಪ್ರಸಿದ್ಧವಾದ ಪವಾಡ ಪುಣ್ಯಕ್ಷೇತ್ರ ದೇವರಗುಂಡಗುರ್ತಿ ಶ್ರೀ ಮೈಲಾರಲಿಂಗೆಶ್ವರ ದೇವಸ್ಥಾನಕ್ಕೆ ಮಂಜೂರಾದ 25 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಶಾಸಕ ಮತ್ತು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಶಿವನಗೌಡ ನಾಯಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಗುರುವಾರ ಗುಂಡಗುರ್ತಿಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮತ್ತು ಮಠದ ಪೂಜ್ಯರಾದ ನಿಜಲಿಂಗಸ್ವಾಮಿ ಅವರಿಂದ ಆಶೀರ್ವಾದ ಪಡೆದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಪ್ರಕಾಶ ಪಾಟೀಲ, ಉಣ್ಣೆ ಮಲ್ಲಪ್ಪ ರಾಯಚೂರು, ಮಲ್ಲಪ್ಪ ಎನ್ ಹೊಸಮನಿ, ಹೊನ್ನಯ್ಯತಾತ ದೇವರಗುಡ್ಡ, ಭೀಮಲಿಂಗ, ರಂಗನಾಥ ನಾಯಕ ಅಂಗಡಿ, ಗುರುಪಾದ ಮತ್ತಿತರರಿದ್ದರು.