ಮೈಸೂರು, ನ. 28 : ಮಾಜಿ ಸಿಎಂ ಕುಮಾರಸ್ವಾಮಿ ಹುಣಸೂರು ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ನಿನ್ನೆ, ಕೆ.ಆರ್.ಪೇಟೆಯಲ್ಲಿ ಮತಯಾಚನೆ ಮಾಡಿದ್ದರು.
ಈ ವೇಳೆ ಅನರ್ಹ ಶಾಸಕ ನಾರಾಯಣಗೌಡ ತನಗೆ ಮೋಸ ಮಾಡಿ ಹೋದ ಎಂದು ಎಚ್ಡಿಕೆ ವೇದಿಕೆಯಲ್ಲೇ ಅತ್ತಿದ್ದರು. ಇದಾದ ಬಳಿಕ ಬಿಜೆಪಿ ನಾಯಕರು ಕುಮಾರಸ್ವಾಮಿ ಕುಟುಂಬ ಚುನಾವಣೆ ಸಮಯ ಬಂದಾಗ ಅಳುವುದು ಸಾಮಾನ್ಯ ಎಂದು ಗೇಲಿ ಮಾಡಿದ್ದರು. ಇದರಿಂದ ಕೆಂಡಾಮಂಡಲರಾದ ಕುಮಾರಸ್ವಾಮಿ, ‘ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್’ ಎಂದು ತಿರುಗೇಟು ನೀಡಿದ್ಧಾರೆ.