ಒಂಭತ್ತು ತಿಂಗಳ ಹಿಂದೆ ಮದುವೆ.. ಯುವತಿ ಆತ್ಮಹತ್ಯೆ

  • In Crime
  • August 5, 2021
  • 170 Views
ಒಂಭತ್ತು ತಿಂಗಳ ಹಿಂದೆ ಮದುವೆ.. ಯುವತಿ ಆತ್ಮಹತ್ಯೆ

ಹಾಸನ: ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ನಿವಾಸಿ ಪೂಜಾ (೨೦) ಮೃತ ದರ‍್ದೈವಿ.
ಮೃತ ಪೂಜಾ ಪೋಷಕರ ವಿರೋಧದ ನಡುವೆಯೂ ಸಕಲೇಶಪುರದ ಅಶ್ವತ್ಥ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅಶ್ವತ್ಥ್ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಯುವತಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಸಕಲೇಶಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos